ರೂಪುರೂಪುಗಳನು ದಾಟಿ

Author : ಎಸ್. ದಿವಾಕರ್‌

Pages 406

₹ 293.00




Year of Publication: 2014
Published by: ಆಕೃತಿ ಪುಸ್ತಕ
Address: ಬೆಂಗಳೂರು

Synopsys

‘ರೂಪುರೂಪುಗಳನು ದಾಟಿ’-ಈ ಕೃತಿಯು ಸಾಹಿತಿ ಎಸ್. ದಿವಾಕರ ಅವರ ಆಯ್ದ ಬರೆಹಗಳ ಸಂಕಲನ. ಈ ಲೇಖಕರ ಬರೆಹಗಳನ್ನು ಆಯ್ದು ಸಂಕಲಿಸಿದವರು ನರೇಂದ್ರ ಪೈ. ಲೇಖಕ ಎಸ್. ದಿವಾಕರ ಅವರು ವಸ್ತು ಸ್ಥಿತಿಗೆ ಆದ್ಯತೆ ನೀಡುತ್ತಲೇ ತಮ್ಮ ಬರೆಹಕ್ಕೆ ಗಟ್ಟಿತನ ತಂದು ಕೊಡುವವರು. ವಿಚಾರಗಳ ಪ್ರಖರತೆಯೂ ಅವರ ಬರೆಹದ ಆಕರ್ಷಣೆಯಾಗಿದೆ. ಕಾಲಕಾಲಕ್ಕೆ ಬರೆದ ಬರೆಹಗಳ ಸಂಗ್ರಹಿಸಿದ ಕೃತಿ.

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Related Books