ಪಡಿಮಿಡಿತ

Author : ಬಿ.ಆರ್. ಲಕ್ಷ್ಮಣರಾವ್

Pages 244

₹ 170.00




Year of Publication: 2016
Published by: ಸಿವಿಜಿ ಪಬ್ಲಿಕೇಷನ್ಸ್
Address: 2ನೇ ಮುಖ್ಯರಸ್ತೆ, ಜಬ್ಬಾರ್‌ ಬ್ಲಾಕ್, ವೈಯಾಲಿಕಾವಲ್, ಬೆಂಗಳೂರು- 560 003

Synopsys

ಕವಿ ಬಿ.ಆರ್. ಲಕ್ಷ್ಮಣ ರಾವ್ ಅವರು ಕತೆಗಳನ್ನೂ ಬರೆದಿದ್ದಾರೆ. ಈ ಪುಸ್ತಕವು ಅವರ ಗದ್ಯ ಬರಹಗಳ ಸಂಕಲನ. ಈ ಪುಸ್ತಕದಲ್ಲಿ ಲಕ್ಷ್ಮಣರಾವ್‌ ಅವರ 50ಕ್ಕೂ ಹೆಚ್ಚು ಬರಹಗಳು ಸಂಕಲನಗೊಂಡಿವೆ. ಅವುಗಳನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಲಾಗಿದೆ. ಲಕ್ಷ್ಮಣರಾವ್‌ ಅವರು ಬರೆಹಗಳನ್ನು 'ವಿಚಾರ', 'ವಿನೋದ', 'ವಿಮರ್ಶೆ', 'ವ್ಯಕ್ತಿಚಿತ್ರ' ಎಂದು ವಿಂಗಡಿಸಿದ್ದಾರೆ. ಬಿ.ಆರ್.ಎಲ್. ಅವರ ಲಘು ಧಾಟಿಯ ಬರವಣಿಗೆಯನ್ನು ಇಲ್ಲಿ ಕಾಣಬಹುದು. ಇಲ್ಲಿನ ಬಹುತೇಕ ಬರಹಗಳು ಸಂಕ್ಷಿಪ್ತ ರೂಪದಲ್ಲಿವೆ. ಹಗುರ ಹಾಗೂ ವೈನೋದಿಕ ಶೈಲಿಯ ಬರಹಗಳಿವು. ವೈನೋದಿಕ ಇದ್ದರೂ ಅವು ಹೇಳುವ ವಿಷಯ, ಸಂಗತಿ, ಸತ್ಯ ಹೇಳಲು ಹಿಂದೇಟು ಹಾಕುವುದಿಲ್ಲ. ಲಲಿತ ಪ್ರಬಂಧದ ಧಾಟಿಯಲ್ಲಿರುವ ಬರಹಗಳಲ್ಲಿ ವ್ಯಕ್ತಿಗಳನ್ನು ಕಹಿ ಇಲ್ಲದೇ ನೋಡುವ ಆರೋಗ್ಯಕರ ದೃಷ್ಟಿಯಿದೆ. ಸರಳ, ಸುಗಮ ಬರಹಗಳು ಮುದ ನೀಡುತ್ತವೆ.

ಲಕ್ಷ್ಮಣರಾವ್‌ ಅವರು ಆಧುನಿಕ ಕವಿಗಳ ಕುರಿತ ಬರಹಗಳು ಅವರ ಕಾವ್ಯ ಪ್ರೀತಿಯನ್ನು ಬಿಚ್ಚಿಡುತ್ತವೆ. ನಿಸಾರ್ ಅಹಮದ್, ಪಿ. ಲಂಕೇಶ್, ಸುಮತೀಂದ್ರ ನಾಡಿಗ್, ಸುಬ್ರಾಯ ಚೊಕ್ಕಾಡಿ ಮತ್ತಿತರರ ಕವಿತೆಗಳ ಬಗ್ಗೆ ಬರೆದಿರುವ ಲಕ್ಷ್ಮಣರಾವ್ ಅವರು ಕೆ.ಎಸ್. ನರಸಿಂಹಸ್ವಾಮಿ, ಕಾಳಿಂಗರಾಯರು, ಟಿ.ಎಸ್. ಛಾಯಾಪತಿ, ಬಿ.ಕೆ. ಸುಮಿತ್ರ, ಸಚಿನ್ ತೆಂಡೂಲ್ಕರ್ ಅವರ ವ್ಯಕ್ತಿಚಿತ್ರಗಳು ಸೊಗಸಾಗಿವೆ.

About the Author

ಬಿ.ಆರ್. ಲಕ್ಷ್ಮಣರಾವ್
(09 September 1946)

ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್‌. ಲಕ್ಷ್ಮಣರಾವ್‌ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.  ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...

READ MORE

Related Books