ಮಾತಿಗೂ ಆಚೆ

Author : ಅಬ್ದುಲ್ ರಶೀದ್

Pages 92

₹ 30.00




Year of Publication: 1995
Published by: ನಮ್ಮ ಪ್ರಕಾಶನ
Address: ನಂ.5/8 , ಶಾರದ ನಗರ, ಹಾಸನ ಸರ್ಕಲ್, ತಿಪಟೂರು- 572202

Synopsys

‘ಮಾತಿಗೂ ಆಚೆ’ ಅಬ್ದುಲ್ ರಷೀದ್ ಅವರ ಲೇಖನಗಳ ಸಂಕಲನ. ಇಲ್ಲಿಯ ವೈಶಿಷ್ಟ್ಯವೆಂದರೆ ಇವು ಕತೆ, ಕವಿತೆ, ಪ್ರಬಂಧ, ಲೇಖನ, ಹರಟೆ, ಹೀಗೆ ಏನೆಲ್ಲಾ ಹೌದು ಮನದ ತುಂಬ ಚಂದದ ಕನಸುಗಳ ನೇಯ್ದುಕೊಂಡು, ಅವೆಲ್ಲವಕ್ಕೂ ಪ್ರೀತಿಯ ಕೌದಿಯ ಕೌಚಿಕೊಂಡ, ಉತ್ಸಾಹಗಳ ಮುಗ್ಧ, ತುಂಟ ಲೋಕವಿದು. ಒಮ್ಮೆ ಮಗುವಿನಂತೆ, ಮತ್ತೊಮ್ಮೆ ಸಂತನಂತೆ, ಮಗದೊಮ್ಮೆ ಕಿಲಾಡಿಯಂತೆ ಮಾತಾಡುವ ಇವುಗಳೊಳಗಿನ ಹುಡುಗ ಪ್ರೀತಿ ಮಾಡೋ ಹೊತ್ತಲ್ಲಿ ಕಾಡು ಸುತ್ತುತ್ತಾನೆ, ಗಿಡಕ್ಕೆ ಪಾತಿ ಮಾಡಿ ನೀರು ಬಿಡುತ್ತಾನೆ, ಚೇಷ್ಟೆ ಮಾಡೋ ಹೊತ್ತಲ್ಲಿ ಗಂಭೀರವಾಗುತ್ತಾನೆ. ಬೇಜಾರಾದಲ್ಲಿ ಹತ್ತಿರವರ ಗೋಳು ಹೊಯ್ಕಂಡು ಅವರ ತಲೆ ಚಿಟ್ಟು ಹಿಡಿಸಿ, ಕೊನೆಗೆ ಏನೂ ಆಗಿಲ್ಲವೆಂಬಂತೆ ತಣ್ಣಗೆ ಯಾವುದಾದರೊಂದು ಹಾಡಿನೊಳಕ್ಕೆ ನುಸುಳಿಬಿಡುತ್ತಾನೆ. ಇಲ್ಲ ಯಾವುದೋ ಮುದುಕನೊಬ್ಬನ ನೆನಪಿನ ಕಟ್ಟೊಳಗಿಂದ ಪ್ರೇಮದ ಕತೆಯನ್ನು ಹೆಕ್ಕಿಸಿ, ಮುದುಕ ಒಂದರೆಕ್ಷಣ ನಾಚಿ ಕೆಂಪಾಗುವಂತೆ ಮಾಡಿ, ಆ ಕಂಪಿನ ಕಳೆಯಲ್ಲಿ ಒಳಗೊಳಗೆ ಸಣ್ಣಗೆ ನಕ್ಕುಬಿಡುತ್ತಾನೆ. ಹೀಗೆ ಇಂಥ ವೈವಿಧ್ಯ ಬೆರಗುಗಳು ಇಲ್ಲಿವೆ.

About the Author

ಅಬ್ದುಲ್ ರಶೀದ್
(28 February 1965)

'ಕೆಂಡಸಂಪಿಗೆ' ಎಂಬ ಅಂತರ್ಜಾಲ  ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು. ಕೊಡಗು ಜಿಲ್ಲೆಯ ಸುಂಟಿಕೊಪ್ಪದ  ರಶೀದ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  'ಹಾಲು ಕುಡಿದ ಹುಡುಗಾ', 'ಪ್ರಾಣಪಕ್ಷಿ' ಎಂಬ ಕಥಾಸಂಕಲನ ಪ್ರಕಟಿಸಿರುವ ಅಬ್ದುಲ್ ರಶೀದ್ ಕವಿ, ಅಂಕಣಕಾರರು ಕೂಡ. ಅಬ್ದುಲ್ ರಶೀದ್ ಅವರ ಕತೆಗಳು ಕನ್ನಡ ಕಥಾಲೋಕಕ್ಕೆ ವಿಶಿಷ್ಟ ನುಡಿಗಟ್ಟು ನೀಡಿವೆ. ನನ್ನ ಪಾಡಿಗೆ ನಾನು’ ಮೊದಲ ಕವನ ಸಂಕಲನ. 'ನರಕದ ಕೆನ್ನಾಲಿಗೆಯಂತ ನಿನ್ನ ಬೆನ್ನಹುರಿ' ಅವರ ಇದುವರೆಗಿನ ಎಲ್ಲ ಕವಿತೆಗಳನ್ನು ಒಳಗೊಂಡ ಸಂಕಲನ. ’ಮಾತಿಗೂ ಆಚೆ', 'ಅಲೆಮಾರಿಯ ದಿನಚರಿ', 'ಕಾಲುಚಕ್ರ' ...

READ MORE

Related Books