ಹಾಲುಮತ ಹಿರಿಮೆ: ವಿಜಯನಗರ ಸಾಮ್ರಾಜ್ಯ

Author : ಲಿಂಗದಹಳ್ಳಿ ಹಾಲಪ್ಪ

Pages 130

₹ 120.00




Year of Publication: 2015
Published by: ಹಾಲುಮತ  ಹಕ್ಕಬುಕ್ಕ ಸಂಸ್ಕೃತಿ ಪ್ರತಿಷ್ಠಾನ
Address: ಬಳ್ಳಾರಿ

Synopsys

ಇತಿಹಾಸ, ಸಂಸ್ಕೃತಿ, ಸಮಾಜ ಹೀಗೆ ವಿವಿಧ ಆಯಾಮಗಳ ಅಧ್ಯಯನ ಕೃತಿ-ಹಾಲುಮತ ಹಿರಿಮೆ: ವಿಜಯನಗರ ಸಾಮ್ರಾಜ್ಯ. ಸಾಹಿತಿ ಡಾ. ಲಿಂಗದಹಳ್ಳಿ ಹಾಲಪ್ಪ ಅವರು ರಚಿಸಿದ್ದಾರೆ. ಕೃತಿಯ ಬೆನ್ನುಡಿಯಲ್ಲಿ ಲೇಖಕರು ಪ್ರಸ್ತಾಪಿಸಿದಂತೆ ‘ಈ ಕೃತಿಯು ಹಿಂದೂ ಧರ್ಮ ಪಾಲಕರ ಮತ್ತು ಕನ್ನಡ ಸಂಸ್ಕೃತಿಯ ಕೊನೆಯ ಸಾಮ್ರಾಜ್ಯವಾಗಿದೆ. ಅಖಂಡ 300 ವರ್ಷಗಳ ಕಾಲ ಕನ್ನಡ ಸಂಸ್ಕೃತಿಯನ್ನು, ಗಾಢ ಧಾರ್ಮಿಕತೆಯನ್ನು ಮೈಗೂಡಿಸಿಕೊಂಡು ಕನ್ನಡ ದೈವ, ಕನ್ನಡ ಸಂಸ್ಕೃತಿ, ದಾರ್ಶನಿಕತೆ, ಈ ನೆಲದ ಸಂಪ್ರದಾಯಗಳನ್ನು ಹೋರಾಟದ ಮೂಲಕ ಉಳಿಸಿಕೊಂಡು ಬಂದ ಸಾಮ್ರಾಜ್ಯ-ವಿಜಯನಗರ ಸಾಮ್ರಾಜ್ಯ. ಕರ್ನಾಟಕದಲ್ಲಿ ಹಕ್ಕಬುಕ್ಕರ ಸಾಧನೆಯ ನೆನಪು, ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ, ಕನಕದಾಸ, ಬಸವಣ್ಣ ಮೊದಲಾದವರ ಆರಾಧನೆಯಲ್ಲಿ ಮಸುಕಾಗಿ ಹೋಗಿದೆ. ಅದಕ್ಕಾಗಿ, ಹಕ್ಕಬುಕ್ಕರ ಸಾಧನೆಯನ್ನು ಜನತೆ-ಸರ್ಕಾರ ಗುರುತಿಸಬೇಕಿದೆ. ಹಂಪಿಯನ್ನು ವಿವಿಧ ಅನ್ಯಶಕ್ತಿಗಳು ತಮ್ಮ ನೆಲೆಯನ್ನಾಗಿ ಮಾಡಿಕೊಳ್ಳಲು ಯತ್ನಿಸುತ್ತಿವೆ. ರಾಷ್ಟ್ರೀಯವಾದಿಗಳು ಅಂಜನಾದ್ರಿ ಬೆಟ್ಟವನ್ನು ಕೇಸರೀಕರಣಗೊಳಿಸಲು ಯತ್ನಿಸುತ್ತಿದ್ದಾರೆ. ತೆಲುಗು ಭಾಷೆ-ಸಂಸ್ಕೃತಿಯನ್ನು ಶ್ರೀಕೃಷ್ಣದೇವರಾಯ ಪೋಷಿಸಿದ್ದ ಎಂದು ಆಂಧ್ರಪ್ರದೇಶದ ಜನರು ಈ ಹಂಪಿಯನ್ನು ತಮ್ಮ ಭಾಷಾಂಧದ ತೆಕ್ಕೆಯೊಳಗೆ ಸೆಳೆಯುತ್ತಿದ್ದಾರೆ. ಅತ್ತ, ತುಳುವರು, ಶ್ರೀಕೃಷ್ಣದೇವರಾಯನನ್ನು ವೈಭವೀಕರಿಸುತ್ತ, ವಿಜಯನಗರ ಸಾಮ್ರಾಜ್ಯದ ಸಾಧನೆಯನ್ನು ತಮ್ಮದೆಂದು ಬಿಂಬಿಸುತ್ತಿದ್ದಾರೆ. ಇಂಹ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು.’ ಎಂದು ಓದುಗರ ಗಮನ ಸೆಳೆಯಲಾಗಿದೆ.

About the Author

ಲಿಂಗದಹಳ್ಳಿ ಹಾಲಪ್ಪ
(03 February 1958)

ಕವಿ, ಕತೆಗಾರ ಡಾ. ಲಿಂಗದಹಳ್ಳಿ ಹಾಲಪ್ಪನವರು (ಜನನ: 1958 ಫೆಬ್ರುವರಿ 3ರಂದು) ಹಾವೇರಿ, ಸೂರತ್ಕಲ್‌ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದು, ಪ್ರಸ್ತುತ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿ, ನಿವೃತ್ತರು. ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.  ಕಳೆದ 15 ವರ್ಷಗಳಿಂದ ಸಾಹಿತ್ಯ ಸಮಾಜ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಕೈಗೊಂಡು ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದು, ಹಾಲುಮತ ದೈವಗಳ ಹುಟ್ಟು, ಇತಿಹಾಸ, ಆಚರಣೆ ಮತ್ತು ಸಂಪ್ರದಾಯ ಮುಂತಾದ ವಿಷಯಗಳು ಹೊಸ ಹೊಸ ಚಚೆ೯ಯನ್ನು ಹುಟ್ಟುಹಾಕಿವೆ. ಇವರ ಹಲವು ಕ್ರತಿಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಪಡಿಸಿದೆ.   ಕೃತಿಗಳು: ಹಾಲುಮತದ ಹಿರಿಮೆ ...

READ MORE

Related Books