ಡಾ. ಎಂ.ಎಂ. ಕಲಬುರ್ಗಿ ಹತ್ಯೆ: ಪ್ರತಿಕ್ರಿಯೆ

Author : ವೀರಣ್ಣ ದಂಡೆ

Pages 624

₹ 300.00




Year of Publication: 2016
Published by: ಕವಿಮಾರ್ಗ ಪ್ರಕಾಶನ
Address: ತೇಜಸ್ವಿನಿ, ಸರಸ್ವತಿಪುರ, ವಿಶ್ವವಿದ್ಯಾಲಯ ಅಂಚೆ, ಕಲಬುರಗಿ- 585106

Synopsys

‘ಎಂ.ಎಂ. ಕಲಬುರ್ಗಿ ಹತ್ಯೆ: ಪ್ರತಿಕ್ರಿಯೆ’ ಹಿರಿಯ ಸಂಶೋಧಕ, ಸಾಹಿತಿ ಡಾ. ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಕುರಿತು ನಡೆದ ಹಲವು ಚರ್ಚೆಗಳು, ಹಿರಿ-ಕಿರಿಯರ ಅನಿಸಿಕೆಗಳನ್ನು ಡಾ. ವೀರಣ್ಣ ದಂಡೆ ಸಂಪಾದಿಸಿದ್ದಾರೆ.

ಡಾ. ಎಂ.ಎಂ. ಕಲಬುರ್ಗಿ ಅವರಂತಹ ಧೀಮಂತ ಕನ್ನಡಿಗನ ಅತ್ಯಂತ ದಾರುಣಮಯವಾದ ಕೊನೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾದರೂ ಅಗತ್ಯವಾಗಿ ದಾಖಲಾಗಬೇಕಾದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ, ಮುದ್ರಣ ಮಾಧ್ಯಮಗಳಲ್ಲಿ ದಾಖಲಾದ ಸುದ್ದಿಗಳನ್ನು, ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ, ಸಂಯೋಜಿಸಿ, ಸಂಪಾದಿಸಿ ಇಂತಹ ಒಂದು ದಾಖಲೆ ಸಾಹಿತ್ಯವನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಲಾಗಿದೆ.

‘ಈ ಕೃತಿಯ ಗರ್ಭದಲ್ಲಿ ದುರ್ಘಟನೆಯೊಂದು ಅಡಗಿದ್ದರೂ ಅದು ಕನ್ನಡ ಸಂಸ್ಕೃತಿಯ ಸ್ಮೃತಿಯಲ್ಲಿ ಉಳಿಯಬೇಕಾದುದು ತೀರ ಅವಶ್ಯಕ. ಹಾಗಾಗಿ, ನಾಡಿನ ಸಾವಿರಾರು ಜನ ಹಿರಿಯರ, ಕಿರಿಯರ ಪ್ರತಿಕ್ರಿಯೆಗಳ ಗುಚ್ಛವೇ ಈ ಕೃತಿ. ಇದು ಡಾ. ಎಂ.ಎಂ. ಕಲಬುರ್ಗಿ ಅವರಿಗೆ ಕರ್ನಾಟಕದ ಭಾವನೆಗಳು ಅರ್ಪಿಸುತ್ತಿರುವ ಶ್ರದ್ಧಾಂಜಲಿ ಎಂದೇ ನಾನು ಭಾವಿಸುತ್ತೇನೆ’ ಎನ್ನುತ್ತಾರೆ ಕೃತಿಯ ಸಂಪಾದಕ ವೀರಣ್ಣದಂಡೆ.

About the Author

ವೀರಣ್ಣ ದಂಡೆ
(02 November 1951)

ಜಾನಪದ ತಜ್ಞ, ಸಂಶೋಧಕ ವೀರಣ್ಣ ದಂಡೆಯವರು ಹುಟ್ಟಿದ್ದು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸಲಗರ ಗ್ರಾಮದಲ್ಲಿ. ತಂದೆ ಶರಣಪ್ಪ ದಂಡೆ, ತಾಯಿ ಬಂಡಮ್ಮ. ಪ್ರಾರಂಭಿಕ ಶಿಕ್ಷಣ ಸಲಗರ. ಬಿ.ಎ, ಎಂ.ಎ. ಪದವಿ ಕಲಬುರ್ಗಿ. “ಕಲಬುರ್ಗಿ ಜಿಲ್ಲೆಯ ಜನಪದ ಕಥೆಗಳ ಆಶಯ ಮತ್ತು ಮಾದರಿಗಳು” ಮಹಾಪ್ರಬಂಧ ಮಂಡಿಸಿ ಕಲಬುರ್ಗಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. 1984ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಬೋಧನಾವೃತ್ತಿ. ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಣೆ. ಸಹಾಯ ಸಂಶೋಧಕರಾಗಿ ಉತ್ತರ ಕನ್ನಡದ ಏಳು ಜಿಲ್ಲೆಗಳ ಪ್ರವಾಸ. ಜಾನಪದ ವೈದ್ಯಕೋಶ ಸಂಶೋಧನಾ ಯೋಜನೆಯಡಿ ಕ್ಷೇತ್ರ ಸಹಾಯಕರ ಕಾರ್ಯ. ನಾಲ್ಕು ...

READ MORE

Related Books