ಶಿವರಾಮ ಕಾರಂತರ ಲೇಖನಗಳು ಸಂಪುಟ-4

Author : ಮಾಲಿನಿ ಮಲ್ಯ

Pages 534

₹ 160.00




Year of Publication: 1994
Published by: ಪ್ರಸಾರಾಂಗ
Address: ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿ- 574199

Synopsys

‘ಶಿವರಾಮ ಕಾರಂತರ ಲೇಖನಗಳು ಸಂಪುಟ-4’ ಕನ್ನಡದ ಬಹುಮುಖ್ಯ ಲೇಖಕರಲ್ಲಿ ಒಬ್ಬರಾದ ಶಿವರಾಮ ಕಾರಂತರ ಲೇಖನ ಸಂಕಲನ. ಈ ಕೃತಿಯನ್ನು ಲೇಖಕಿ ಮಾಲಿನಿ ಮಲ್ಯ ಅವರು ಸಂಪಾದಿಸಿದ್ದಾರೆ. ಇಲ್ಲಿ ಕಾರಂತರು ತಮ್ಮ ಅನುಭವಗಳು ಮತ್ತು ಸಾಹಿತ್ಯ ಚಿಂತನಗಳ ಕುರಿತು ಬರೆದ ಲೇಖನಗಳು ಸಂಕಲನಗೊಂಡಿವೆ. ಈ ಕೃತಿಯಲ್ಲಿ ಅನುಭವಗಳು ವಿಭಾಗದಲ್ಲಿ ಹಳ್ಳಿಯೆಂದರೆ ಬೆಳ್ಳಿ, ಹಳ್ಳಿಯ ನೆನಪು, ಶಾಂತಿ ಶಿಬಿರ, ಶಾಂತಿ ಶಿಬಿರದ ವರದಿ, ನಾನು ಕಂಡ ಭೂತ, ದೋಣಿ, ಹರಿಗೋಲುಗಳಲ್ಲಿ, ಧರ್ಮಸ್ಥಳದ ನಡಾವಳಿ, ಸಂಚಾರಿ ಜೀವನ, ಹಳೆಯ,ಎಳೆಯ ನೆನಪುಗಳು, ನನ್ನ ಬದುಕಿನ ಪಯಣ, ತತ್ತಿಯೊಳಗಿನ ಮರಿ, ಸೇರಿದಂತೆ 25 ಅನುಭವ ಲೇಖನಗಳಿದ್ದರೆ, ಸಾಹಿತ್ಯ ಚಿಂತನೆಗಳು ವಿಭಾಗದಲ್ಲಿ ಸಾಹಿತ್ಯ ಹುಟ್ಟುವುದು ಅನುಭವವನ್ನು ಹೇಳಬೇಕೆನ್ನುವ ಆಕಾಂಕ್ಷೆಯಿಂದ, ಕಾದಂಬರಿಗಳು, ಕಾದಂಬರಿಯ ಬೆಳವಣಿಗೆ, ನಿಸರ್ಗ, ಸಾಹಿತ್ಯ ಮತ್ತು ಕಾದಂಬರಿ, ಐತಿಹಾಸಿಕ ಕಾದಂಬರಿಗಳು ಲೇಖನ ಸೇರಿದಂತೆ ಒಟ್ಟು 58 ಮಹತ್ವದ ಲೇಖನಗಳು ಸಂಕಲನಗೊಂಡಿವೆ.

About the Author

ಮಾಲಿನಿ ಮಲ್ಯ
(29 June 1951)

ಶಿವರಾಮ ಕಾರಂತರ ಬದುಕು ಬರಹಗಳನ್ನು ಕನ್ನಡ ಓದುಗರಿಗೆ ಉಣಬಡಿಸಿ, ಕಾರಂತರ ವೈಚಾರಿಕ ನೆಲೆ, ಜೀವನ ಪ್ರೀತಿಯನ್ನು ಮತ್ತಷ್ಟು ಅರ್ಥೈಸಿಕೊಳ್ಳುವಲ್ಲಿ ಕೊಡುಗೆ ನೀಡಿದವರು ಕಾದಂಬರಿಗಾರ್ತಿ ಮಾಲಿನಿ ಮಲ್ಯ .ಮೂಲತಃ ಉಡುಪಿಯವರು. ಭಾರತೀಯ ಜೀವವಿಮಾನಿಗಮದ ನಿವೃತ್ತ ಉದ್ಯೋಗಿ. ಕೃತಿಗಳು: ನಾನು ಕಂಡ ಕಾರಂತರು (ವ್ಯಕ್ತಿಚಿತ್ರ), ಗೊಂದಲಪುರದ ನಿಂದಲರು (ಕಾದಂಬರಿ), ದಾಂಪತ್ಯ ಗಾಥೆ (ಕಿರುಕಾದಂಬರಿ), ಶಿವರಾಮಕಾರಂತರ ಕಿನ್ನರಲೋಕ (ಲೇಖನ ಸಂಗ್ರಹ), ಚಿಣ್ಣರ ಲೋಕದಲ್ಲಿ ಕಾರಂತರು ಭಾಗ 1 ಮತ್ತು 2, ಸಾಹಿತ್ಯೇತರ ಕಾರಂತರು, ಕಾರಂತ ಉವಾಚ,  ’ಶಿವರಾಮ ಕಾರಂತರ ವಾಙ್ಮಯ ವೃತ್ತಾಂತ, ಶಿವರಾಮ ಕಾರಂತರ ಕೃತಿ ಕೈಪಿಡಿ, ಶಿವರಾಮ ಕಾರಂತರ ಲೇಖನಗಳು-8 ಸಂಪುಟಗಳು, ಪಕ್ಷಿಗಳ ಅದ್ಭುತ ...

READ MORE

Related Books