ಕ್ಯಾಪ್ಸೂಲಗಿತ್ತಿ

Author : ನಾಗೇಶ ಹೆಗಡೆ

Pages 80

₹ 30.00




Year of Publication: 1996
Published by: ಅಭಿನವ ಪ್ರಕಾಶನ
Address: #17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ನಾಗೇಶ ಹೆಗಡೆ ಅವರ ಲೇಖನಗಳ ಸಂಗ್ರಹ ವೇ ’ಕ್ಯಾಪ್ಸೂಲಗಿತ್ತಿ.’ ಕೃತಿಗೆ ಮುನ್ನುಡಿ ಬರೆದಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ, ಇಲ್ಲಿಯ ಪ್ರತಿ ಪುಟದ ಬರೆಹವು ಕುತೂಹಲ, ಶ್ರದ್ಧೆ, ವಿನೋದ ಒಳಗೊಂಡಿದೆ. ನಮ್ಮ ನಡುವೆ ಈಚೆಗೆ ಬರೆಯುತ್ತಿರುವ ಎಷ್ಟೋ ಕವಿಗಳು ನಾಗೇಶ ಹೆಗಡೆ ಅವರಂತೆ ಸ್ವಾರಸ್ಯಕರವಾಗಿ ಭಾಷೆಯನ್ನು ಬಳಸಿದರೂ ಸಾಕು ಎಂದು ಪ್ರತಿ ಪುಟದಲ್ಲೂ ನನಗೆ ಅನ್ನಿಸಿದೆ’ ಎಂದು ಈ ಕೃತಿಯ ಮಹತ್ವವನ್ನು ಹೆಚ್ಚಿಸಿದ್ದಾರೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books