ಇಂಥವರೂ ಇದ್ದಾರೆ ಜಗದೊಳಗೆ..

Author : ರವೀಂದ್ರ ಭಟ್ಟ

Pages 148

₹ 110.00




Year of Publication: 2013
Published by: ಪ್ರಗತಿ ಪ್ರಕಾಶನ
Address: ಮಹಡಿ.ನಂ.2406,,2407/ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ,ಕೆ.ಆರ್. ಮೊಹಲ್ಲಾ,ಮೈಸೂರು- 570 004

Synopsys

ರವೀಂದ್ರ ಭಟ್ಟ ಅವರ ಲೇಖನಗಳ ಸಂಕಲನ ‘ಇಂಥವರೂ ಇದ್ದಾರೆ ಜಗದೊಳಗೆ..’. ಪ್ರಜಾವಾಣಿಯ ಸಂಗತ ವಿಭಾಗದಲ್ಲಿ ಬರೆದ ಲೇಖನಗಳ ಸಂಗ್ರಹವಿದು. ಇಲ್ಲಿರುವ ಬಹುತಾಕ ವಸ್ತು ಬೇರೆ ಬೇರೆಯಾದರೂ ಮಾನವೀಯತೆ ಅವುಗಳ ಮೂಲಸತ್ವ, ಜನ ಸಾಮಾನ್ಯರ ಅಸಾಮಾನ್ಯ ಗುಣ, ದೊಡ್ಡವರ ಸಣ್ಣತನ ಎಲ್ಲವೂ ಇಲ್ಲಿವೆ ಎನ್ನುತ್ತಾರೆ ಲೇಖಕ ರವೀಂದ್ರ ಭಟ್ಟ.

ಕೃತಿಯ ಪರಿವಿಡಿಯಲ್ಲಿ ಕರೆದರೆ ಬಂದಾನಯೇ ಭಗೀರಥ, ಅಜ್ಞಾತ ಆಟೋ ಚಾಲಕನ ನೆನೆದು!, ಕಾಳು ಮುರಿದುಕೊಂಡು ಬಿದ್ದ ಶೋಷಣೆ!, ಇಲ್ಲಿ ಕಲ್ಲರಳಿ ಹೂವಾಗದು!, ಇಂಥವರೂ ಇದ್ದಾರೆ ಜಗದೊಳಗೆ, ಧನ್ಯವಾಯಿತು ಕಲೆ ಋಣ ಸಂದಾಯದಲ್ಲಿ!, ಇಲ್ಲಿ ಸಾಲವೆಂಬುದು ಗಗನ ಕುಸುಮ!, ಹೈದರಾಲಿ ನಮಗೆ ಆದರ್ಶ ಆಗಲಾರನೇ?, ನಗರ ಸ್ವ್ಛ ಮಾಡುವವರ ‘ಹೊಲಸು ಬದುಕು’, ಈ ಹನುಮನಿಗೆ ರಾಮನ ನೆರವಿಲ್ಲ!, ಅನ್ನ ಕಸಿದುಕೊಂಡ ಮಾಹಿತಿ ಹಕ್ಕು!, ಕಲಾವಿದರಿಗೆ ‘ಅರಮನೆ ಕಂಪ್ನಿ’ ಪಾಠ!, ಡಾರ್ವಿನ್ ವಾದಕ್ಕೆ 150ವರ್ಷ, ಘೋರ ವಿಷ: ಹಾವಿನದ್ದೋ ಮನುಷ್ಯನದ್ದೋ!, ನಮ್ಮ ನಡುವೆ ಇನ್ನೂ ‘ಗಾಂಧಿ’ಗಳಿದ್ದಾರೆ! ಹೀಗೆ 42 ಶೀರ್ಷಿಕೆಗಳ ಲೇಖನಗಳು ಈ ಸಂಕಲನದಲ್ಲಿವೆ.

About the Author

ರವೀಂದ್ರ ಭಟ್ಟ
(07 July 1967)

ರವೀಂದ್ರ ಭಟ್ಟ ಅವರು ಪ್ರಸ್ತುತ `ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕರು.  ಅವರ ಊರು ಉತ್ತರ ಕನ್ನಡ ಜಿಲ್ಲೆಯ ಐನಕೈ. ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಬದುಕು ಹಾಗೂ ಬರಹಗಳಲ್ಲಿ ಮಾನವೀಯ ಅಂತಃಕರಣವೇ ಪ್ರಧಾನ. `ಸಂಯುಕ್ತ ಕರ್ನಾಟಕ’ದ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಅವರಿಗೆ ಕರ್ನಾಟಕ ಸರ್ಕಾರದ ``ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’’ ಪುರಸ್ಕೃತರು. `ಮೂರನೇ ಕಿವಿ’ ಪುಸ್ತಕ ಅವರ ಐದನೇ ಕೃತಿ. ...

READ MORE

Related Books