ರೇಖಾನುಸಂಧಾನ

Author : ಪುಂಡಲೀಕ ಕಲ್ಲಿಗನೂರ

Pages 470

₹ 600.00




Year of Publication: 2022
Published by: ಕನ್ನಡ ಪ್ರಕಾಶನ
Address: ಕಲಾನಿಕೆರನ, #36 ರೇವಡಿ ಬಡಾವಣೆ, ಗಜೇಂದ್ರಗಡ- 582

Synopsys

‘ರೇಖಾನುಸಂಧಾನ’ ಕೃತಿಯು ಪುಂಡಲೀಕ ಕಲ್ಲಿಗನೂರ ಅವರ ‘ನೀಲು’ವಿನಿಂದ ರಾಮಾಯಣದವರೆಗೆ ರಡನೆಒಂದು ನೋಟ–ಮಾಟದ ಧ್ಯಾನ ಕುರಿತ ರೇಖಾಚಿತ್ರಗಳ ಮಾಹಿತಿಯನ್ನು ಒಳಗೊಂಡಿದೆ. ನೀಲುಗೊಂದು ಚಿತ್ರದ ಶಾಲು, ನೋಟ-ಮಾಟದ ರೇಖಾಚಿತ್ರಗಳು, ರಾಜ್ -ಕೀಯ ವ್ಯಂಗ್ಯ ಚಿತ್ರಗಳು, ಅಂತರಂಗದ ಮೃದುಂಗ, ಮಿಣಿ ಮಿಣಿ ಸೋಮೆನಿ, ಚಿತ್ರಾಗ್ನಿ, ಕನ್ನಡ ಪ್ರಭೆಯ ರೇಖಾ ಚಿತ್ರಗಳು, ಕಾವ್ಯ- ಕಥಾತ್ಮಕ ರೇಖಾ ಚಿತ್ರಗಳು, ರಾಮಾಯಣದ ಕಿರು ಚಿತ್ರ ನೋಟ, ಸಾಧು ಸಂತರು ಮತ್ತು ರಾಜ ಪರಿವಾರ, ಶಿಲ್ಪಕಲಾ ಪ್ರೇರಿತ ರೇಖೆಗಳು, ಶಿಲ್ಪಕಲೆ ಮತ್ತು ವಚನ ಸಾಹಿತ್ಯ ಮತ್ತು ಹನ್ನೆರಡನೆ ಶತಮಾನದ ಅಭಿವ್ಯಕ್ತಿಗಳಾಗಿ, ಇಷ್ಟು ಮಾಹಿತಿಯನ್ನು ನಾವು ಈ ಕೃತಿಯ ಮೊದಲ ಭಾಗದಲ್ಲಿ ಕಾಣಬಹುದಾಗಿದೆ. ಅನುಬಂಧ ಭಾಗದಲ್ಲಿ ಮೆಲುಕು: ಬಳುಕುವ ಗೆರೆಗಳು.. ಪುಸ್ತಕ ವಿಮರ್ಶೆ, ಕಲೆಯ ಕೈ ಹಿಡಿದು… ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ದ ಮೀಟ್- ದ ಹಿಂದು ಪತ್ರಿಕೆಯ ಒಂದು ಸಂದರ್ಶನ. ರಾಘವ, ಮುನ್ನುಡಿ: ನೋಡುವ ಮುನ್ನ… ಎಂ.ಎಚ್ ಕೃಷ್ಣಯ್ಯ, ನಲ್ನುಡಿ: ರೇಖೆಗಳೊಂದಿಗೆ ಅನುಸಂಧಾನ.. ದಿನೇಶ್ ಕುಮಾರ್ ಎಸ್.ಸಿ, ವಚನ ಚಿತ್ರ ಸಂಗಮ: ರೇಖಾಚಿತ್ರಗಳ ರಾಜ-ಗೊ.ರು. ಚನ್ನಬಸಪ್ಪ, ಶಿಶುವಿನೊಂದಿಗೆ ತೊಟ್ಟಲು ತೂಗುವ ಪರಿ: ಎಚ್.ಎ. ಅನಿಲಕುಮಾರ, ಶಿಲ್ಪಕಲಾ ದೇಗುಲಗಳು-ಕನ್ನಡಪ್ರಭ ಮತ್ತು ವಿಶ್ವವಾಣಿ ಇವೆಲ್ಲವುಗಳನ್ನೂ ಒಳಗೊಂಡಿದೆ.

About the Author

ಪುಂಡಲೀಕ ಕಲ್ಲಿಗನೂರ

ರೇಖಾಚಿತ್ರ ಕಲಾವಿದ ಹಾಗೂ  ಸಾಹಿತಿ ಪುಂಡಲೀಕ ಕಲ್ಲಿಗನೂರ ಅವರು ಗದಗ ಜಿಲ್ಲೆಯ ಗಜೇಂದ್ರಗಡದವರು. ತಂದೆ ವೀರಪ್ಪ, ತಾಯಿ ಮಲ್ಲಮ್ಮ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ರೇಖಾಚಿತ್ರಗಳು ಬೆಳಕು ಕಂಡಿವೆ. ಪುಸ್ತಕಗಳಿಗೆ ಮುಖಪುಟಗಳನ್ನು ರಚಿಸಿದ್ದಾರೆ. ಕೃತಿಗಳು: ಸಲಿಲಧಾರೆ, ಪ್ರೀತಿಮಳೆ (ಕವನ ಸಂಕಲನಗಳು), ದುರ್ಗಮ (ನಾಟಕ) ಕಾಡು ನಮ್ಮ ನಾಡು (ಮಕ್ಕಳ ನಾಟಕ) ಅರಿವೇ ಗುರು (ಪ್ರಬಂಧಗಳು) ಪ್ರಭಾತ್ ಸರ್ಕಸ್ (ಕಥಾಸಂಕಲನ) ಬೇಲೂರು ಹಳೇಬೀಡು – ಶಿಲ್ಪಕಲಾ ಸಾಮ್ರಾಜ್ಯ (ಪರಂಪರೆ ಕಳಕಳಿಯ ಲೇಖನಗಳು), "ಶಿಲ್ಪಕಲಾ ದೇಗುಲಗಳು" ಗ್ರಂಥಕ್ಕೆ  ಇತ್ತೀಚೆಗಷ್ಟೇ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಲಂಕೇಶ್ ಪತ್ರಿಕೆಯ ನೀಲು ಕವಿತೆಗಳಿಗೆ ಇವರದೇ ರೇಖಾ ಚಿತ್ರ ...

READ MORE

Related Books