ಅರ್ಜುನ ಪುರಾಣ ಪುರುಷರ ಜೀವನಗಾಥೆಯ ಪುಸ್ತಕವನ್ನು ಲೇಖಕ ಬನ್ನಂಜೆ ಗೋವಿಂದಾಚಾರ್ಯ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಅರ್ಜುನನ ಕುರಿತಾಗಿ ಪಂಚಪಾಂಡವರಲ್ಲಿ ಮಧ್ಯದವನು, ಶ್ರೀ ಕೃಷ್ಣ ಗೆಳೆಯ. ಬಿಲ್ಕೆವಗಾರಿಕೆಯಲ್ಲಿ ಅಸಮಾನನಾದವನು. ಈಶ್ವರನೊಡನೆ ಸೆಣಸಿ ಅವನನ್ನು ಮೆಚ್ಚಿಸಿ ಪಾಶುಪತಾಸ್ತ್ರ ಪಡೆದ. ಮಹಾಭಾರತ ಯುದ್ಧದಲ್ಲಿ ಕೃಷ್ಣ ಇವನ ಸಾರಥಿ. ಇವನಿಗೆ ಕೃಷ್ಣ ಮಾಡಿದ ಉಪದೇಶವೇ ಭಗವದ್ಗೀತೆ ಎಂದು ಪ್ರಸಿದ್ಧವಾಯಿತು. ಮಾಹನ್ ಕ್ಷತ್ರಿಯನಾದ ಅರ್ಜುನ ಶ್ರೀ ಕೃಷ್ಣನ ಸಹೋದರಿ ಸುಭದ್ರೆಯ ಗಂಡ. ಮಹಾಭಾರತ ಯುದ್ದಕ್ಕೋಸ್ಕರ ಸ್ವತಃ ಇಂದ್ರನನ್ನೆ ತನ್ನ ತಪಸ್ಸಿನ ಮೂಲಕ ವರ ಪಡೆದ ಮಹಾನ್ ವೀರ. ಈ ಎಲ್ಲಾ ಕಥೆಗಳ ತುಣುಕುಗಳೊಂದಿಗೆ ಈ ಕೃತಿಯಲ್ಲಿ ಅರ್ಜುನನ ಕುರಿತಾಗಿ ವಿವರಿಸಲಾಗಿದೆ.
©2024 Book Brahma Private Limited.