ಪ್ರೀತಿ, ನಂಬಿಕೆ, ಸ್ನೇಹ, ಸೌಹಾರ್ದತೆಯ ವಸ್ತು ವಿಷಯದ ಮೇಲೆ ರಚಿತಗೊಂಡಿರುವ ಪುಟ್ಟ ಕತೆಗಳ ಗುಚ್ಚವೇ ಕಾಡುವ ಕತೆಗಳು. ಪ್ರತಿ ಕತೆಯು ನೀತಿಪಾಠದ ಜೊತೆಗೆ ವ್ಯವಸ್ಥೆಯ ಕುರಿತು ಮಾತನಾಡುವುದು ಲೇಖಕರ ವಿಶೇಷ. ಓದುಗರಿಗೆ ಸ್ಫೂರ್ತಿ ನೀಡುವ ಈ ಕೃತಿಯಲ್ಲಿಯ ಕತೆಗಳು ನಿಮ್ಮನ್ನು ಕಾಡದೇ ಇರಲಾರವು. ಯಾವು ಈ ಕತೆ, ಏನನ್ನು ಹೇಳಲು ಹೊರಡುತ್ತಿವೆ ಎಂಬುದನ್ನು ತಿಳಿಯಲು ನೀವು ಓದಿ ಕಾಡುವ ಕತೆಗಳು.
ಪತ್ರಕರ್ತ, ಬರಹಗಾರ ಗಿರೀಶ್ ತಾಳಿಕಟ್ಟೆ ಅವರು ಜನಿಸಿದ್ದು 1984 ನವೆಂಬರ್ 13. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಇವರು ಹುಟ್ಟೂರು. ಪ್ರಸ್ತುತ ನಾನು ಗೌರಿ ಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊರತರುತ್ತಿದ್ದ ಗೈಡ್ ಮಾಸಿಕದ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹವ್ಯಾಸ ಹಾಗೂ ಆಸಕ್ತಿಯಿಂದ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ (ವ್ಯಕ್ತಿ ವಿಕಸನ ಬರಹಗಳು), ಕಾಡುವ ಕತೆಗಳು, ನನ್ನ ಕೈಗಂಟಿದ ನೆತ್ತರು (ಅನುವಾದ) ಮುಂತಾದವು ಇವರ ಪ್ರಮುಖ ಕೃತಿಗಳು. ...
READ MORE