ಕಥೆಗಳ ಕಟ್ಟು

Author : ಅಮರೇಶ ನುಗಡೋಣಿ

Pages 308

₹ 350.00




Year of Publication: 2019
Published by: ದೇಸೀ ಪುಸ್ತಕ
Address: ನಂ. 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು 560040
Phone: 9845096668

Synopsys

ಬರಹಗಾರ, ಕಥೆಗಾರ ಅಮರೇಶ ನುಗಡೋಣಿಯವರ ’ಕಥೆಗಳ ಕಟ್ಟು’ ಕಥಾ ಸಂಕಲನ.  ಮಣ್ಣು ಸೇರಿತು ಬೀಜ, ಹೊತ್ತು ಮೂಡುವ ಸಮಯ, ಮೂಡಲು ಹರಿಯಿತು, ತಮಂಧದ ಕೇಡು, ನೀರು ತಂದವರು, ಉತ್ಕ್ರಮಣ, ಊರಮ್ಮ, ಸವಾರಿ, ಮೀರುವ ಘನ, ದೈವಕ್ಕೆ ಮೊದಲು ಶರಣೆಂಬೆ, ಪಕ್ವಕಲ್ಲದೆ ಪರಿಣಾಮ ಕಾಣಿಸದು, ನೆರಳ ಸೂರು, ಪರಿಣಾಮಿ, ದಾಳಿ ನಡೆದಾವೋ ಅಣ್ಣಾ, ಚುಕ್ಕಿ ಮದುವೆ ಪ್ರಸಂಗ, ಇನ್ನಿತರೆ ಹಲವಾರು ಕಥೆಗಳ ಗುಚ್ಛ ’ಕಥೆಗಳ ಕಟ್ಟು’ ಹೊತ್ತು ಸಾಗಿದೆ.

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Related Books