ಚಿತ್ತಾಲರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ ’ಕತೆಯಾದಳು ಹುಡುಗಿ’. ಇದೇ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಮಹಾರಾಷ್ಟ್ರದ ಗೌರವ ಪುರಸ್ಕಾರಗಳೂ ಪ್ರಾಪ್ತವಾಗಿದವು. ಕನ್ನಡದ ಶ್ರೇಷ್ಠ ಕಥಾಸಂಕಲನಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
ಈ ಸಂಕಲನದ ಬೆನ್ನುಡಿಯಲ್ಲಿ ಕತೆಗಾರ ಶಾಂತಿನಾಥ ದೇಸಾಯಿ ಅವರು ಕತೆಗಳು ಕುರಿತು ’ಚಿತ್ತಾಲರಿಗೇ ವಿಶಿಷ್ಟವಾದ - 'ಚಿತ್ತಾಲತನದ ಮುದ್ರೆ ಬಿದ್ದ' – ಅವರ ಕಥನಕೌಶಲ್ಯದ ಒಂದು ಘಟ್ಟ 'ಸಂದರ್ಶನ', 'ಆಬೋಲಿನಿಗಳಲ್ಲಿ ಆಕಾರ ಪಡೆಯುತ್ತ 'ಆಟ'ದಲ್ಲಿ ಉಚ್ಯಾಂಕವನ್ನು ಮುಟ್ಟಿತ್ತು. ಆ ನಂತರದ ಕಾಲದಲ್ಲಿ ಫಲಿಸಿದ ಇಲ್ಲಿಯ ಕತೆಗಳು ಅವರ ಬರವಣಿಗೆಯ ಇನ್ನೊಂದು ಮಹತ್ವದ ಘಟ್ಟದ ಆರಂಭವನ್ನು ಸೂಚಿಸುತ್ತದೆ. ದಟ್ಟ ಅನುಭವಗಳ ಸೂಕ್ಷ್ಮಾತಿಸೂಕ್ಷ್ಮಗಳನ್ನು ಹಿಡಿಯಲು ತವಕಿಸುವ ಸcerರ್tತೆ ಹಾಗೂ ಜೀವಂತ ಭಾವನೆಗಳಲ್ಲಿ ಹುಟ್ಟಿಬರುವ ಸಾಂಕೇತಿಕತೆ, ಇವುಗಳ ಜೊತೆಗೆ ಚಿತ್ತಾಲರ ಆಸ್ಥೆಗಳ ಕ್ಷಿತಿಜವೂ ಅತ್ಯಂತ ವಿಸ್ತಾರಗೊಂಡದ್ದನ್ನು ಕಾಣಿಸುವ ಈ ಕತೆಗಳು ವೈವಿಧ್ಯಪೂರ್ಣವಾದ, ಕೆಲವು ವಿಷಯಗಳಲ್ಲಿ ಕನ್ನಡಕ್ಕೆ ಹೊಸತೆನ್ನಿಸುವ ಪ್ರಯೋಗಗಳಾಗಿವೆ. ಸೃಜನಶೀಲ ಕಲ್ಪಕತೆ ಹಾಗೂ ಚಿಂತನೆಗಳಲ್ಲಿ ದೃಷ್ಟಿಗೋಚರವಾದ ಮನುಷ್ಯ ಸಾಧ್ಯತೆಗಳಿಂದ ಮುಲಕಿತಗೊಂಡ, ಜೊತೆಗೆ ಬದುಕಿನ ಅನಂತ ರಹಸ್ಯಗಳ ಬಗ್ಗೆ ಬೆರಗು ತುಂಬಿದ ಪ್ರೀತಿಯುಳ್ಳ ಮನಸೊಂದು ಇಲ್ಲಿ ಕಾರ್ಯಪ್ರವೃತ್ತವಾಗಿದೆ. ಕನ್ನಡ ಕಥಾಪ್ರಪಂಚದಲ್ಲಿ 'ಆಟ'ದಂತೆ ’ಕತೆಯಾದಳು ಹುಡುಗಿ' ಕೂಡ ಒಂದು ಅತ್ಯಂತ ಗಟ್ಟಿಯಾದ ಮಹತ್ವದ ಕೃತಿ’ ಎಂದು ಅಭಿಪ್ರಾಯಪಟ್ಟಿದ್ದಾರೆ.