ಕನಸಿನ ಹೊಸ ಅಧ್ಯಾಯ

Author : ವಿಜಯಕಾಂತ ಪಾಟೀಲ

Pages 96

₹ 40.00




Year of Publication: 2005
Published by: ಸುಮುಖ ಪ್ರಕಾಶನ
Address: ಬೆಂಗಳೂರು

Synopsys

ಕನಸಿನ ಹೊಸ ಅಧ್ಯಾಯ’ ಸಂಪಾದಿತ ಬಹುಮಾನಿತ ಕತೆಗಳ ಸಂಕಲನ. ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ ಮೊದಲ ` ಡಾ.ಪಾಪು ಕಥಾ ಪುರಸ್ಕಾರ" ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮತ್ತು ಮೆಚ್ಚುಗೆ ಪಡೆದ ಏಳು ಕತೆಗಳು ಇಲ್ಲಿವೆ.

ಹೊಸಭಾಷೆ, ಅನುಭವಗಳ ಅಭಿವ್ಯಕ್ತಿಯಾಗಿ ಮೂಡಿಬಂದ ಇಲ್ಲಿಯ ಕತೆಗಳೂ ಸಮಕಾಲೀನತೆಗೆ ಹೆಚ್ಚಾಗಿ ಸ್ಪಂದಿಸಿದ್ದು ಈ ಕತೆಗಳ ಹೆಗ್ಗಳಿಕೆ. ಬಹುಮಾನಿತ ಕತೆಗಾರರಾದ ಆನಂದ ಋಗ್ವೇದಿ, ವಿಶಾಖ್.ಎನ್, ಮನೋಹರ ಜನ್ನು, ಬಸವಣ್ಣೆಪ್ಪ ಕಂಬಾರ, ಹಂಝ ಮಲಾರ ಮೊದಲಾದವರ ಕತೆಗಳಿವೆ.

About the Author

ವಿಜಯಕಾಂತ ಪಾಟೀಲ
(09 August 1969)

ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...

READ MORE

Related Books