ಬಂಜೆತನ ಬಯಸಿದವಳು

Author : ಎನ್ನೇಬಿ ಮೊಗ್ರಾಲ್‌ಪುತ್ತೂರು

Pages 140

₹ 140.00




Year of Publication: 2019
Published by: ವರ್ಣ ಪ್ರಕಾಶನ
Address: ನಂ. 254 ಬ್ಲಾಕ್ 175, ಕೆ.ಎಚ್.ಬಿ. ಅಪಾರ್ಟಮೆಂಟ್, ಕೆ.ಎಸ್. ಟೌನ್. ಬೆಂಗಳೂರು - 560 060
Phone: 9343704216

Synopsys

ಲೇಖಕ ’ಎನ್ನೇಬಿ’ ಮೊಗ್ರಾಲ್ ಪುತ್ತೂರು ಅವರ ಮೊದಲ ಕಥಾ ಸಂಕಲನ ’ಬಂಜೆತನ ಬಯಸಿದವಳು’. ಕೃತಿಗೆ ಮುನ್ನುಡಿ ಬರೆದ, ಎಸ್.ಆರ್. ವಿಜಯಶಂಕರ, ’ ಇಲ್ಲಿನ ಭಾಷೆಯ ಸಂವಹನ ಸ್ವರೂಪವು ಕಥೆಗಳ ವಿವರಣೆಗಳಲ್ಲೂ, ಸುಂದರ ಪ್ರಸ್ತುತಿಯಲ್ಲೂ ಕಾಣಬಹುದು. ಲೇಖಕರಿಗೆ ಕಥೆ ಹೇಳುವುದರಲ್ಲಿ ನಿರ್ಮಲವಾದೊಂದು ಆನಂದವಿದೆ. ಇಲ್ಲಿ ಬರೆದ ಅಷ್ಟೂ ಕಥೆಗಳಲ್ಲೂ ಕಥೆಗಾರನ; ಕಥೆ ಹೇಳುವಾಗ ಉಂಟಾಗುವ ಉಲ್ಲಾಸ ಹಾಗೂ ಘಟನೆಗಳನ್ನು ವಿವರಿಸುವುದರಲ್ಲಿ ಇರುವ ಉತ್ಸಾಹ ಗೋಚರಿಸುತ್ತದೆ. ಇದು ಇಲ್ಲಿನ ಕಥೆಗಳ ಚೈತನ್ಯ ಶಕ್ತಿ.’ ಎಂದು ಪ್ರಶಂಸಿದ್ದಾರೆ.

About the Author

ಎನ್ನೇಬಿ ಮೊಗ್ರಾಲ್‌ಪುತ್ತೂರು

ಲೇಖಕ, ಅನುವಾದಕ ಎನ್ನೇಬಿ ಮೊಗ್ರಾಲ್‌ ಪುತ್ತೂರು ಅವರು ಮೂಲತಃ ಕಾಸರಗೋಡಿನವರು. ಮಂಗಳ ವಾರಪತ್ರಿಕೆಯ ಸಂಪಾದಕರಾಗಿರುವ ಅವರು ಮೂರು ದಶಕಗಳಿಂದ ಪತ್ರಿಕಾ ರಂಗದಲ್ಲಿದ್ದಾರೆ. 'ಬಂಜೆತನ ಬಯಸಿದವಳು' ಇವರ ಚೊಚ್ಚಲ ಕಥಾ ಸಂಕಲನವಾಗಿದ್ದು ಅನುವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮಲಯಾಳಂನಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ’ರೂತ್ ಮತ್ತು ರಸುಲ್' ನೀಳ್ಗತೆಯನ್ನು ಮಲಯಾಳಂ ಭಾಷೆಗೂ ಅನುವಾದಿಸಿದ್ದಾರೆ. ...

READ MORE

Related Books