ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಅಂಬಿಗ ಮತ್ತು ದಡ. 25 ಬಿಡಿ ಸಂಪುಟಗಳನ್ನು ಒಳಗೊಂಡ ಸಮಗ್ರ ಬುದ್ಧ ಸಾಹಿತ್ಯ ಮಾಲೆ-19ರ ಕೃತಿ. ಜಗತ್ತಿನ ಸರ್ವ ಶ್ರೇಷ್ಠ ಕಥೆಗಳೆಂದು ಪರಿಗಣಿಸಲಾದ ಅಮರ ಜಾತಕ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ. ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. ಜೀವನ-ಬದುಕು-ಬಾಳು ಎಂಬಿತ್ಯಾದಿ ಸೂಕ್ಷ್ಮ ಪರಿಕಲ್ಪನೆಗಳ ವಿಶಾಲಾರ್ಥಗಳನ್ನು ತಿಳಿಯ ಪಡಿಸುತ್ತವೆ.