“ಬೇಟೆ” ಕಥಾಸಂಕಲನದಲ್ಲಿ ’ಹದಿನೈದು ಮಕ್ಕಳ ಕತೆಗಳಿದ್ದು’ ಪುರಾಣೇತರ ಇತಿಹಾಸಗಳು ಇದರಲ್ಲಿ ಇಣುಕುತ್ತದೆ. ಇಲ್ಲಿರುವ ಕತೆಗಳು ತುಷಾರ, ವಿಜಯ ಕರ್ನಾಟಕ, ಸಂಜೆ ದರ್ಪಣ, ಲೋಕದರ್ಶನ, ಉದಯವಾಣಿ, ಕರ್ಮವೀರ, ಲೋಕಧ್ವನಿ ವಿಕ್ರಾಂತ, ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದು ಭಾಗೀರಥಿಯವರ ಐದನೆಯ ಸಂಕಲನವಾಗಿದ್ದು ಭೀತಿಯ ತುದಿಗಾಲಿನಲ್ಲಿ ಇರಿಸುವ ಯುದ್ಧ, ಹಿಂಸೆಗಳು ಯಾಕಾಗಿ? ರಾಜರುಗಳು ಹಿಂಸಾವಿನೋದಕ್ಕಾಗಿ, ಶೌರ್ಯದ ಹೆಸರಿನಲ್ಲಿ ನಡೆಸುವ ಯುದ್ಧಗಳು ಯಾಕಾಗಿ? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ರಚಿಸಿದ್ದಾರೆ. ಮಕ್ಕಳನ್ನು ಮನೋಜ್ಞವಾಗಿ ಹಿಡಿದಿಟ್ಟು ಪ್ರಶ್ನಿಸುವ ಹಲವು ಕಥೆಗಳು ಇಲ್ಲಿವೆ.
ಲೇಖಕಿ ಭಾಗೀರಥಿ ಹೆಗಡೆ ಅವರು ಜನಿಸಿದ್ದು, 1948 ಜುಲೈ 23ರಂದು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ತಟ್ಟಿಕೈ ಗ್ರಾಮದವರು. ತಾಯಿ ಗಣಪಿ ಭಟ್ಟ. ತಂದೆ ವೆಂಕಟ್ರಮಣ ಭಟ್ಟ. ಹುಟ್ಟೂರು ಹಾಗೂ ಸಿದ್ದಾಪುರದಲ್ಲಿ ಎಸ್.ಎಸ್.ಎಲ್.ಸಿ ಶಿಕ್ಷಣ ಪಡೆದಿದ್ದಾರೆ. ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಆಸಕ್ತಿಯಿದ್ದ ಭಾಗೀರಥಿ ಅವರು ಹಲವಾರು ಕಥೆ, ಕವನಗಳನ್ನು ಬರೆದಿದ್ದಾರೆ. ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಇವರು ಬರೆದ ಲೇಖನಗಳು ಪ್ರಕಟವಾಗಿವೆ. ಭಾಗೀರಥಿ ಅವರ ಪ್ರಮುಖ ಕೃತಿಗಳೆಂದರೆ ಸ್ವೀಕಾರ, ಅರ್ಥ, ಪ್ರವಾಹ, ಗಿಳಿಪದ್ಮ, ಬೇಟೆ, ಪ್ರತಿಮೆ, ಆಳ, ಹಿಮನದಿ (ಕಥಾ ಸಂಕಲನ), ಚಂದ್ರಗಾವಿ, ಒಂದು ದಿನ (ಕವನ ...
READ MORE