ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು

Author : ಯರ್ಮುಂಜ ರಾಮಚಂದ್ರ



Published by: ಸಂಗಮ ಸಾಹಿತ್ಯಮಾಲೆ
Address: ಕಲ್ಲಡ್ಕ

Synopsys

ಅತ್ಯಂತ ಪ್ರತಿಭಾವಂತ ಕವಿ ಮತ್ತು ಕಥೆಗಾರರಾಗಿದ್ದ ಯರ್ಮುಂಜ ರಾಮಚಂದ್ರ ಅವರು ತಮ್ಮ ಇಪ್ಪತ್ತೆರಡನೇ ವಯಸ್ಸಿನಲ್ಲಿಯೇ ತೀರಿಕೊಂಡವರು. ಅಷ್ಟರೊಳಗೇ ಅವರು ಹಲವು ಪ್ರಬುದ್ಧ ಕವಿತೆ ಮತ್ತು ಕಥೆಗಳನ್ನು ಬರೆದಿದ್ದರು. ಅವರ ಕವಿತೆಗಳ ಸಂಕಲನ ಮರಣಾನಂತರ ಪ್ರಕಟವಾಯಿತು. ಕಥೆಗಳ ಸಂಗ್ರಹ ‘ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು’ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಇವು ಅತ್ಯಂತ ಪ್ರಬುದ್ಧ ಕಥೆಗಳೆಂದು ಆಗಲೇ ಹಲವಾರು ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಗಿದ್ದವು. ನಿಬ್ಬೆರಗುಗೊಳಿಸಿದ್ದ ಪ್ರತಿಭೆ ಯರ್ಮುಂಜ ರಾಮಚಂದ್ರ ಅವರು.

About the Author

ಯರ್ಮುಂಜ ರಾಮಚಂದ್ರ

ದಕ್ಷಿಣ ಕನ್ನಡದ ಯರ್ಮುಂಜದಲ್ಲಿ ಜನಿಸಿದ (9-2-1933) ಯರ್ಮುಂಜ ರಾಮಚಂಚದ್ರ ಅವರು ತಮ್ಮ 22ನೇ ವಯಸ್ಸಿನಲ್ಲಿಯೇ ತೀರಿಕೊಂಡರು (1955). ಹದಿನೈದನೇ ವಯಸ್ಸಿನಲ್ಲಿಯೇ ಕವಿತೆ ಬರೆಯಲು ಆರಂಭಿಸಿದ್ದ ಅವರು, ಹೈಸ್ಕೂಲು ಓದಿನ ಆ ದಿನಗಳಲ್ಲಿಯೇ ‘ಬಾಲವಿಕಟ’ ಎಂಬ ಹಸ್ತಪತ್ರಿಕೆಯನ್ನು ಆರಂಭಿಸುವಷ್ಟು ಮಟ್ಟಿಗೆ ಬರವಣಿಗೆಯ ಬಗ್ಗೆ ಆಸಕ್ತರಾಗಿದ್ದರು. ಪ್ರತಿಭವಂತರಾಗಿದ್ದ ಅವರು ಬಳಿಕ ‘ಪಾಂಚಜನ್ಯ’ ಹಸ್ತಪತ್ರಿಕೆಯನ್ನೂ ನಡೆಸಿದರು. ಏಕೋಪಾಧ್ಯಾಯ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಕೆಲ ಕಾಲ ಅಂಚೆ ಕಚೇರಿಯಲ್ಲಿಯೂ ಕೆಲಸ. ತಾಲೂಕು ಕಚೇರಿಯಲ್ಲಿ ಟೈಪಿಸ್ಟ್ ಆಗಿಯೂ ದುಡಿಮೆ. ‘ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು’ ಅವರ ಕಥಾಸಂಕಲನ. ಕವನಸಂಕಲನ ‘ವಿದಾಯ’ ಅವರ ಮರಣಾನಂತರ ಪ್ರಕಟವಾಯಿತು. ...

READ MORE

Related Books