ಅರ್ಧಕ್ಕೆ ನಿಂತ ಚಿತ್ರ

Author : ಮೋದೂರು ತೇಜ

Pages 136

₹ 90.00




Published by: ಕಾಲ ಪ್ರಕಾಶನ
Address: ನಂ. 39/3, ಕೆಳಮಹಡಿ, 9ನೇ ಮೇನ್, ಶಿವನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ರಾಜಾಜಿನಗರ, ಬೆಂಗಳೂರು-560016
Phone: 080-2342778

Synopsys

ತಮ್ಮ ವೇದಾವತಿ ತೀರದಲ್ಲಿ’ ಕಾದಂಬರಿಯ ಮೂಲಕ ಭರವಸೆ ಮೂಡಿಸಿರುವ ಕತೆಗಾರ ಮೋದೂರು ತೇಜ. ಅವರ ಹೊಸ ಕಥಾ ಸಂಕಲನ ’ಅರ್ಧಕ್ಕೆ ನಿಂತ ಚಿತ್ರ’. ಈ ಸಂಕಲನದಲ್ಲಿ ಒಟ್ಟು ಹತ್ತು ಕತೆಗಳಿವೆ. ಇಲ್ಲಿನ ಕತೆಗಳಲ್ಲಿ ನೆಲಮೂಲದ ದ್ರವ್ಯವನ್ನು ಕಟ್ಟಿಕೊಡುವ ಮಹತ್ವಾಕಾಂಕ್ಷೆ ಎದ್ದು ಕಾಣಿಸುತ್ತದೆ. ಕತೆಗಳಲ್ಲಿ ಬಳಸಲಾಗಿರುವ ಗ್ರಾಮೀಣ ಉಪಭಾಷೆ, ಸರಳ-ನೇರ ನಿರೂಪಣೆ, ಸವಿವರ ಚಿತ್ರಣ ನೀಡುವುದು ಎಲ್ಲವೂ ಸಹಜ- ಸುಂದರವಾಗಿ ಮೂಡಿಬಂದಿವೆ.

About the Author

ಮೋದೂರು ತೇಜ

ಲೇಖಕ ಮೋದೂರು ತೇಜ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಕರ್ನಾಟಕ -ಆಂಧ್ರ ಗಡಿಭಾಗದ ಮೋದೂರು ಗ್ರಾಮದವರು. ಪ್ರಾಥಮಿಕ -ಪ್ರೌಢ ಶಿಕ್ಷಣವನ್ನು ಮೋದೂರು, ಜಾಜೂರು, ಚಳ್ಳಕೆರೆ, ಹಾಗೂ ಚಿಕ್ಕಮಗಳೂರಿನಲ್ಲಿ ಪೂರ್ಣಗೊಳಿಸಿದ್ದು, ಮೈಸೂರಿನ ಮುಕ್ತ ವಿ.ವಿ.ಯಿಂದ ಎಂ.ಎ ಪದವಿ ಪಡೆದರು.  ಕೃತಿಗಳು:  ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯದೊಂದಿಗೆ ಪ್ರಕಟಿತ ಕವನ ಸಂಕಲನ-‘ಮರದೊಳಗಣ ಕಿಚ್ಚು (2007). ಬುದ್ಧನ ಮೇಲೂ ಯುದ್ಧ’(2010), ಭೂಮಿ ತೂಕದ ಪ್ರೀತಿ(2011), ಅರ್ಧಕ್ಕೆ ನಿಂತ ಚಿತ್ರ (2013), ಹುಲಿವೇಷ ಇವು ಕಥಾ ಸಂಕಲನಗಳು, ವೇದಾವತಿ ತೀರದಲ್ಲಿ (2011) ಹಾಗೂ ತುದಿ ಇರದ ಹಾದಿ-ಇವು ಕಾದಂಬರಿಗಳು, ನಾಡಿನ ವಿವಿಧ ಪತ್ರಿಕೆಗಳು ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ  ...

READ MORE

Related Books