ವಿಕಲ್ಪ

Author : ವಸುಮತಿ ಉಡುಪ

Pages 128

₹ 110.00




Year of Publication: 2002
Published by: ವಿಜಯ ಸಾಹಿತ್ಯ ಪ್ರಕಾಶನ
Address: ನಂಬರ್, 82 /3 ಸುಂಕೇನಹಳ್ಳಿ, ಹನುಮಂತನಗರ ಬೆಂಗಳೂರು-560019

Synopsys

ಲೇಖಕ ವಸುಮತಿ ಉಡುಪ ಅವರ ಕತಾಸಂಕಲನ ವಿಕಲ್ಪ. ಈ ಕಥಾ ಸಂಕಲನದಲ್ಲಿ ಏಳು ಸಣ್ಣ ಕಥೆಗಳಿವೆ. ವಿಕಲ್ಪ, ಕೂಡು ಕಳೆಯುವ ಆಟ, ಲೋಕದ ಡೊಂಕು, ಒಳ್ಳೆಯ ಹುಡುಗನೊಬ್ಬನ ಕೆಟ್ಟ ದಿನಗಳು,ಸಂದಿಗ್ದ, ಬಾಗಿಲು ತೆಗಿಯೇ ಸೇಸಮ್ಮ,ದ್ವಂದ್ವ. ವಿಕಲ್ಪ : ಲೇಖಕಿ ಕಥೆಯ ಆರಂಭದಲ್ಲಿ ವಾನರರನ್ನು ಪ್ರತಿನಿಧಿಸಲು ಪೌರಾಣಿಕ ಕಥೆಯಾದ ಸೌಗಂಧಿಕಾ ಪ್ರಕರಣದ ಭೀಮ ಹನುಮಂತರ ಸಂಭಾಷಣೆಯನ್ನು ಉಲ್ಲೇಖಿಸುತ್ತಾ ತೊಡಗುತ್ತಾರೆ. ಕಪಿಗಳ ದಾಂದಲೆಯನ್ನು ಆಡು ಭಾಷೆ ಯ ಸೊಗಡಲ್ಲಿ ನಮ್ಮ ಕಣ್ಣೆದುರು ಕಟ್ಟುವಂತೆ ಬರೆಯುವ ಚಾಕ ಚಕ್ಯತೆ ಲೇಖಕಿಯದು. ಕಾಡಿನಿಂದ ಬಂದ ಕಪಿಗಳ ಹಿಂಡು ಮಾಡುವ ದಾಂದಲೆಯಿಂದ ರೋಸಿ ಹೋದ ಹಳ್ಳಿಯಲ್ಲಿ ಇರುವ ಕೃಷಿ ಕುಟುಂಬದ ತರುಣನೊಬ್ಬ ಕೋವಿ ಲೈಸೆನ್ಸ್ ಮಾಡಿಸಿ ಕೋವಿ ಖರೀದಿಸಿ ಮನೆಯಲ್ಲಿ ತಂದು ಇಟ್ಟುಕೊಳ್ಳುತ್ತಾನೆ. ಎಲ್ಲರ ಹಿತನುಡಿಯಂತೆ ಕೊಲ್ಲಲಿಕ್ಕಲ್ಲದೆ, ಹೆದರಿಸಲು ಮಾತ್ರ ಎಂದು ಈಡು ಇಟ್ಟು ಹೊಡೆದ ಗುಂಡು, ಗುರಿ ಹಿಡಿದು ಹೊಡೆಯಲು ಬಾರದಿದ್ದ ತರುಣ ಹೊಡೆದ ಗುಂಡಿನಿಂದಾಗಿ ಒಂದು ಮಂಗ ಸತ್ತು ಬಿದ್ದಿತು. ಸುತ್ತಲಿನವರೆಲ್ಲರ ಹಾಗೂ ಮನೆಯವರ ಆ ಕ್ಷೇಪದ ನುಡಿಗಳಿಂದಾಗಿಯೂ, ಮಂಗ ಸತ್ತು ಬಿದ್ದದು ಮನಸ್ಸಿನಲ್ಲಿ ಅಚ್ಚು ಒತ್ತಿ ದ್ದಕ್ಕಾಗಿಯೂ, ಆತನಿಗೆ ಆಹಾರ ಸೇವಿಸುವ ಸಮಯದಲ್ಲಿ ಹಸಿ ಕೆಂಪು ನೆತ್ತರು ಕಂಡ ಭ್ರಮೆ ಉಂಟಾಗುತ್ತಿತ್ತು.ರಾತ್ರಿ ನಿದ್ರೆ ಕೂಡ ಬರುತ್ತಿರಲಿಲ್ಲ. ಔಷದ ಸೇವಿಸುತ್ತಿರಲಿಲ್ಲ.ಇದರಿಂದಾಗಿ ಬಹಳ ಕೃಶ ಹೊಂದಿದ, ಮನೆಯವರಿಗೆ ಸತ್ತ ಮಂಗನ ಶಾಪದಿಂದಾಗಿ ಮತಿ ವಿಕಲತೆ ಉಂಟಾಯಿತೋ ಎಂಬ ಸಂದೇಹ ಮೂಡಿತು.ಮಂತ್ರ ಯಂತ್ರ ತಂತ್ರ ದ ಮೊರೆ ಹೋಗುವ ತೀರ್ಮಾನಕ್ಕೆ ಹೆತ್ತವರು ಬಂದರು. ಹೀಗೆ ಇನ್ನೂ ಅನೇಕ ಕಥೆಗಳನ್ನು ಓದಿಯೇ ತಿಳಿಯಬೇಕಿದೆ.

About the Author

ವಸುಮತಿ ಉಡುಪ
(18 April 1948)

ಲೇಖಕಿ ವಸುಮತಿ ಉಡುಪ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ 1948 ಏಪ್ರಿಲ್ 18ರಂದು ಜನಿಸಿದರು. ತಾಯಿ ತ್ರಿಪುರಾಂಬ, ತಂದೆ ರಂಗಾಭಟ್ಟರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಕಥೆಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ವಿವಿಧ ಭಾಷೆಗೆ ಅನುವಾದಗೊಂಡಿವೆ.  ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ವಸುಮತಿ ಅವರ ಪ್ರಮುಖ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ ಅವರ ಕತಾ ಸಂಕಲನ. ‘ಸೀತಾಳದಂಡೆ’ ಮತ್ತೊಂದು ಪ್ರಬಂಧ ಸಂಕಲನ. ಅವರ ಹಲವಾರು ಕತೆಗಳು ಹಿಂದಿ, ತೆಲುಗು ಭಾಷೆಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆಗೆ ‘ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ...

READ MORE

Related Books