ಮಳೆಯಲ್ಲಿ ನೆನೆದ ಕತೆಗಳು

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 208

₹ 200.00




Year of Publication: 2021
Published by: ಸಾವಣ್ಣ ಎಂಟರ್ ಪ್ರೈಸಸ್
Address: #12, ಭೈರಸಂದ್ರ ಮುಖ್ಯ ರಸ್ತೆ, ಜಯನಗರ 1ನೇ ಬ್ಲಾಕ್ ಪೂರ್ವ ಬೆಂಗಳೂರು-560011
Phone: 9036312786

Synopsys

‘ಮಳೆಯಲ್ಲಿ ನೆನೆದ ಕತೆಗಳು’ ಕೃತಿಯು ಜೋಗಿ ಹಾಗೂ ಗೋಪಾಲಕೃಷ್ಣ ಕುಂಟಿನಿ ಅವರ ಸಂಪಾದಿತ ಕತೆಗಳ ಗುಚ್ಛವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಕೆ. ಸತ್ಯನಾರಾಯಣ ಅವರು, ಈ ಸಂಪುಟದಲ್ಲಿರುವ ಕತೆಗಳೆಲ್ಲ ಪ್ರತ್ಯೇಕವಾದ ಟಿಪ್ಪಣಿಗಳನ್ನು ಬೇಡುತ್ತವೆ. ಆದರೆ ಈ ಬರಹದ ವ್ಯಾಪ್ತಿಯಲ್ಲಿ ಹಾಗೆ ಮಾಡುವುದು ಸಾಧ್ಯವಿಲ್ಲ. ಕತೆಗಾರಿಕೆಯ ಒಟ್ಟು, ದಿಕ್ಕು, ಪಯಣ ಯಾವ ರೀತಿಯಲ್ಲಿದೆ ಎಂಬುದನ್ನು ಗಮನಿಸುವುದೇ ಹೆಚ್ಚು ಸೂಕ್ತವೆನ್ನಿಸುತ್ತದೆ. ಹೀಗೆ ನಾನು ಗಮನಿಸುವ ನೋಟಗಳು ಇಲ್ಲಿಯ ಕತೆಗಳಿಗೆ ಮಾತ್ರವಲ್ಲ, ಒಟ್ಟಾರೆಯಾಗಿ ಸಮಕಾಲೀನ ಕಥಾ ಪ್ರಪಂಚಕ್ಕೂ ಅನ್ವಯಿಸುತ್ತದೆ ಎಂದಿದ್ದಾರೆ. ಇಲ್ಲಿನ ಕತೆಗಳು ಮತ್ತು ಕತೆಗಳಲ್ಲಿನ ಬದುಕು ಹಾಸು ಹೊಕ್ಕಾಗಿದೆ. ಒಂದರೊಳಗೊಂದು ಬೆರೆತಿವೆ. ಇನ್ನೊಬ್ಬರದೆಂದು ಭಾವಿಸಿ ನಾವು ಹೇಳ ಹೊರಟ ಹಾಗೂ ಬರೆಯ ಹೊರಟ ಕತೆ ಎಲ್ಲೆಲ್ಲೋ ಹೋಗಿ ಹೇಗೆ ಹೇಗೋ ಸುತ್ತಿಕೊಂಡು ಕೊನೆಗೆ ನಮ್ಮ ಮನೆಯ, ಮನಸ್ಸಿನ ಕೋಣೆಯ ಒಳಕ್ಕೂ ಬರುತ್ತದೆ. ಈ ಮಾದರಿಯನ್ನು ಇಲ್ಲಿಯ ಬಹುಪಾಲು ಕತೆಗಳಲ್ಲಿ ಗಮನಿಸಬಹುದು ಎಂದಿದ್ದಾರೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books