ಅನುಪಮಾ ನಿರಂಜನ ಅವರು ಬರೆದ ಮೊದಲ ಕಥಾ ಸಂಗ್ರಹ-ಕಣ್ಮಣಿ. ಮರೆಯಾದ ಸಹೋದರ ಸ್ಮರಣೆಗಾಗಿ ಬರೆದ ಕಥೆ-ಕಣ್ಮಣಿ, ವಿಚಾರಹೀನ ಸಮಾಜದಲ್ಲಿ ಹೆಣ್ಣು ಪಡುತ್ತಿರುವ ಅಸಹನೀಯ ಯಾತನೆ ಕುರಿತ ಕಥೆ- ಮೂಲಾ ನಕ್ಷತ್ರದ ಹುಡುಗಿ, ಗಂಡು-ಹೆಣ್ಣಿನ ಅನ್ಯೋನ್ಯ ಪ್ರೇಮ ಸಂಬಂಧ ಕುರಿತ ಕಥೆ-ಷಹಾಜಾನ್ ಚಂದಣ್ಣ, ಮೂರು ಬಗೆಯ ಮಹಿಳೆಯರ ಗೋಳನ್ನು ಚಿತ್ರಿಸುವ ಕಥೆ-ಆ ಮೂರು ಮನೆಗಳು, ಬದುಕಿನ ಆಶಾವಾದದ ಕಥೆ-ಸಾವಿನ ಮುಖ, ಸಿರಿವಂತರ ಸ್ವಾರ್ಥಕ್ಕೆ ಬಡವರು ನಲುಗುವ ಚಿತ್ರಣದ ಕಥೆ-ಮಣ್ಣು ದಿಬ್ಬದ ಮೇಲೆ, ಹಾಗೂ ಜಾತಿ, ಪ್ರತಿಫಲ ಹೀಗೆ ವಿವಿಧ ಶೀರ್ಷಿಕೆಯ ಕಥೆಗಳು ಇಲ್ಲಿ ಸಂಕಲನಗೊಂಡಿವೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು. ಕಥಾಸಂಕಲನಗಳು- ...
READ MORE