ಗಾಂಧೀ ಬಜಾರ್

Author : ತಿರುಪತಿ ಭಂಗಿ



Year of Publication: 2021
Published by: ಗೌರಿ ಪುಸ್ತಕ ಪ್ರಕಾಶನ
Address: ಬಾಗಲಕೋಟೆ

Synopsys

ಲೇಖಕ ತಿರುಪತಿ ಭಂಗೀ ಅವರ ’ಗಾಂಧೀ ಬಜಾರ್ ’ ಕೃತಿಯು ಕತಾಸಂಕಲನ. ಕೃತಿಗೆ ಬೆನ್ನುಡಿ ಬರೆದಿರುವ ಅಬ್ಬಾಸ್ ಮೇಲಿನಮನಿ ಅವರು, ’ ಗಾಂಧೀ ಬಜಾರ್’ ಒಂದು ಗಮನಾರ್ಹ ಕೃತಿ. ಟ್ರಾಫಿಕ್ ಪೊಲೀಸ್ ಹನುಮಂತಪ್ಪನೆಂಬುವನ ಅಂತರಂಗದ ಪ್ರಾಮಾಣಿಕತೆ ಮತ್ತು ವರ್ತಮಾನದ ವ್ಯವಸ್ಥೆಯ ವಿಪರ್ಯಾಸವನ್ನು ಗಾಢವಾಗಿಸುತ್ತ ನಮ್ಮನ್ನು ಪೂರ್ತಿ ಆವರಿಸಿಕೊಳ್ಳುವ ಯಶಸ್ವಿ ಕತೆಯಾಗಿದೆ. ಇಲ್ಲಿ ಬರುವ ಗಾಂಧೀ ಬಜಾರ್ ಈ ದೇಶದ ಯಾವುದೇ ಗಾಂಧೀ ಬಜಾರ್ಗಳಿಗಿಂತ ಭಿನ್ನವಾಗಿಲ್ಲ. ಈ ಬಜಾರಿನಲ್ಲಿ ನಡೆಯುವ ವಿದ್ಯಮಾನಗಳು ಸೋಜಿಗವನ್ನು ಉಂಟುಮಾಡುತ್ತಲೇ, ಮನುಷ್ಯನ ಬದುಕಿನ ವೈರುಧ್ಯ ಮತ್ತು ಮಾನವೀಯ ಮೌಲ್ಯಗಳ ವೈಪರಿತ್ಯಗಳನ್ನು ನಿರಾವರ್ಣ ಭಾವದಿಂದ ದರ್ಶಿಸುತ್ತದೆ. ’ಗಾಂಧೀ’ ಅನ್ನುವ ಪದನಾಮವೇ ನಮ್ಮನ್ನು ದಟ್ಟವಾಗಿ ಪ್ರಭಾವಿಸುವುದು, ಅವರ ಸತ್ಯ, ಪ್ರಾಮಾಣಿಕತೆ, ಅಹಿಂಸೆಯ ನಿಲುವುಗಳಂತೂ ಪವಾಡ ಸದೃಶ್ಯವೆನ್ನುವಂತೆ ಗೋಚರಿಸುತ್ತದೆ. ಆದರೆ ಈ ಕತೆಯ ಗಾಂಧೀ ಹೆಸರಿನ ಬಜಾರಿನಲ್ಲಿ ಹಗಲು ದೀಪ ಹಚ್ಚಿ ಹುಡುಕಿದರೂ ಆದರ ಮೌಲ್ಯಗಳು ಸಿಕ್ಕಿರುವುದಿಲ್ಲ. ಗಾಂಧೀ ಎಂದರೆ ಪುಳಕಿತರಾಗುವ, ಆರಾಧಿಸುವ, ಯಾರ ಕಾಯಾ, ವಾಚಾ, ಮನಸುಗಳಲ್ಲೂ ಜೀವಂತವಾಗಿ ಉಳಿದಿಲ್ಲ. ಹೀಗಾಗಿ ಈಗ ಎಲ್ಲ ಕಡೆಗೂ ಗಾಂಧೀ ಹೆಸರು ಕಾಣಸಿಗುತ್ತವೆ. ಸರಕಾರಿ ಕಚೇರಿಗಳಲ್ಲಿ ಗಾಂಧೀ ಭಾವಚಿತ್ರ ರಾರಾಜಿಸುತ್ತದೆ. ಗಾಂಧೀ ತತ್ವ -ಸಿದ್ದಾಂತಗಳು ಬಿಕ್ಕಳಿಸುತ್ತವೆ. ಕಾರ್ಯಾಚರಣೆಗಳು, ಅಮಾನುಷ ಪ್ರಸಂಗಗಳು, ಅವಗಡಗಳು, ನಿರಂತರವಾಗಿ ಜರುಗುತ್ತವೆ. ಇದನ್ನು ಲೇಖಕರು ಹನುಮಂತಪ್ಪನೆಂಬ ಪೊಲೀಸ್ ಪೇದೆಯ ಚಡಪಡಿಕೆಯೊಂದಿಗೆ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

About the Author

ತಿರುಪತಿ ಭಂಗಿ

ಕತೆಗಾರ ತಿರುಪತಿ ಭಂಗಿ ಅವರು ಬಾಗಲಕೋಟೆ ಸಮೀಪದ ದೇವನಾಳ ಎಂಬ ಹಳ್ಳಿಯಲ್ಲಿ 1984 ರಲ್ಲಿ ಜನಿಸಿದರು. ತಂದೆ ಮಲ್ಲಪ್ಪ ತಾಯಿ ಗೌರವ್ವ. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡರು. ಹೈಸ್ಕೂಲ್ ಶಿಕ್ಷಣ ಮಾಡುತ್ತಿರುವಾಗಲೇ ಅಜ್ಜ-ಅಜ್ಜಿಯರೂ ತೀರಿಕೊಂಡರು. ಸಾಹಿತ್ಯ ರಚನೆಗೆ ಇವರ ಬಡತನ, ಹಸಿವು, ಅವಮಾನಗಳೇ ಮೂಲ ದ್ರವ್ಯ. . ಬಾಗಲಕೋಟೆಯ ಬಸವೇಶ್ವರ ಸಿ.ಬಿ.ಎಸ್.ಇ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಹೃದಯರಾಗ, ಅವ್ವ, ಕವಳೆಗಣ್ಣಿನ ಹುಡುಗಿ, ಮನಸು ಕೊಟ್ಟವಳು, ಅಪ್ಪ’ ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಮೊದಲ ಕಾದಂಬರಿ ‘ಫೋಬಿಯಾ' 2017ರಲ್ಲಿ ಪ್ರಕಟಣೆ ಕಂಡಿತು. ಅವರ ‘ಜಾತಿ ಕುಲುಮ್ರಾಗ ಅರಳಿದ ಪ್ರೀತಿ’ ಚೊಚ್ಚಲ ಕೃತಿ ...

READ MORE

Related Books