ಬೆಳ್ಳಿಮೈ ಹುಳ

Author : ಜ.ನಾ. ತೇಜಶ್ರೀ

Pages 115

₹ 120.00




Year of Publication: 2020
Published by: ವೈಷ್ಣವಿ ಪ್ರಕಾಶನ
Address: ಕೆ. ಗುಡದಿನ್ನಿ, ಮಾನ್ವಿ ತಾಲೂಕು, ರಾಯಚೂರು ಜಿಲ್ಲೆ
Phone: 9620170027

Synopsys

‘ಬೆಳ್ಳಿಮೈ ಹುಳ’ ಲೇಖಕಿ ಜ.ನಾ. ತೇಜಶ್ರೀ ಅವರ ಕತಾಸಂಕಲನ. ಪತ್ರಕರ್ತ, ಲೇಖಕ ಚ.ಹ. ರಘುನಾಥ್ ಮುನ್ನುಡಿ ಬರೆದು ‘ತೇಜಶ್ರೀ ನನ್ನ ಓರಗೆಯ ಬರಹಗಾರ್ತಿ, ನಾನು ಮೆಚ್ಚುಗೆಯಿಂದ ಅಸೂಯೆಯಿಂದ ನೋಡುವ ಕವಯತ್ರಿ, ಈಗ ಕಥೆಗಳ ಮೂಲಕ ಓದುಗರೆದುರು ಹೊಸ ಪೋಷಾಕಿನಲ್ಲಿ ಪ್ರಕಟಗೊಳ್ಳುತ್ತಿರುವ ಅವರು, `ಬೆಳ್ಳಿಮೈ ಹುಳ' ದ ಮೂಲಕ ಹೊಸ ಪ್ರಭೆಗಾಗಿ ಹಂಬಲಿಸುತ್ತಿರುವ ಕನ್ನಡ ಕಥಾಲೋಕಕ್ಕೆ ಹೊಸ ರಂಗೊಂದನ್ನು ಕೂಡಿಸಿದ್ದಾರೆ’ ಎನ್ನುತ್ತಾರೆ ಚ.ಹ.ರಘುನಾಥ್.

ಓದುಗರಿಗಿಂತಲೂ ಬರೆಯುವವರೇ ಹೆಚ್ಚಿನ ಸಂಖ್ಯೆಯಲ್ಲಿರುವಂತೆ ಮೇಲ್ನೋಟಕ್ಕೆ ಕಾಣಿಸುವ ಕನ್ನಡ ಸಾಹಿತ್ಯ ಸಂದರ್ಭ ಸಂಖ್ಯಾದೃಷ್ಟಿಯಿಂದ ಸಮೃದ್ಧವಾಗಿದ್ದರೂ, ಆ ಉತ್ಸಾಹ ಬರವಣಿಗೆಯ ಅಸಲು ಕಸುಬುದಾರಿಕೆಯಲ್ಲಿ ಕಾಣಿಸದಿರುವುದು ಸಾಹಿತ್ಯದ ಉತ್ತಮಿಕೆಯ ಬಗ್ಗೆ ಕಾಳಜಿಯುಳ್ಳವರನ್ನು ಆತಂಕ್ಕೀಡು ಮಾಡುವಂತಹದ್ದು, ಇಂಥ ಸಂಕ್ರಮಣ ಸಂದರ್ಭದಲ್ಲಿ ಪ್ರಕಟಗೊಂಡಿರುವ ತೇಜಶ್ರೀ ಅವರ ಕಥೆಗಳ ಶಿಲ್ಪದ ಅಚ್ಚುಕಟ್ಟುತನ ಮತ್ತು ಭಾಷೆಯ ಕುಸುರಿತನ, ಸೂಕ್ಷ್ಮ ಭಾವಲೋಕದೊಂದಿಗೆ ಮಿಳಿತಗೊಂಡಿರುವುದು ನನ್ನಂಥ ಓದುಗರಲ್ಲಿ ಸಂಭ್ರಮ ಹುಟ್ಟಿಸುವಂತಹದ್ದು ಎಂದೂ ಅವರು ಪ್ರಶಂಸಿಸಿದ್ದಾರೆ. 

 

About the Author

ಜ.ನಾ. ತೇಜಶ್ರೀ

ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿ‌ದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು (ಕವನ ಸಂಕಲನಗಳು) ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ (ಅನುವಾದಿತ ಕೃತಿಗಳು) ’ನೀನಾಸಂ'ಗಾಗಿ ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ' ನಾಟಕದ ಅನುವಾದ. ಕವಿ ರವೀಂದ್ರ, ...

READ MORE

Related Books