ಸಂಸಾರ ಚಿತ್ರ

Author : ಬೆಟಗೇರಿ ಕೃಷ್ಣಶರ್ಮ (ಆನಂದಕಂದ)

Pages 184

₹ 1.00




Year of Publication: 1934
Published by: ಕರ್ನಾಟಕ ಶಿಕ್ಷಣ ಸಮಿತಿ
Address: ಧಾರವಾಡ

Synopsys

ಆನಂದಕಂದ ಕಾವ್ಯನಾಮದಿಂದ ಖ್ಯಾತರಾಗಿದ್ದ ಬೆಟಗೇರಿ ಕೃಷ್ಣಶರ್ಮ ಅವರ ಒಂಭತ್ತು ಕಥೆಗಳ ಸಂಕಲನ ಇದು. ಈ ಎಲ್ಲ ಕತೆಗಳನ್ನು ಸಂಸಾರ ಚಿತ್ರ ಎಂಬ ಹೆಸರಿನಿಂದ ಕರೆದಿರುವ ಬಗೆಯಲ್ಲಿಯೇ ಈ ಕತೆಗಳ ಹೂರಣ ಅರ್ಥವಾಗುವಂತಿದೆ. ಬೆಟಗೇರಿ ಕೃಷ್ಣಶರ್ಮರ ಸೊಗಸಾದ ಕಥನ ಶೈಲಿಯೊಂದು ಇಲ್ಲಿ ಓದುಗರ ಮನ ತುಂಬುತ್ತದೆ.ಸಾಮಾಜಿಕ ಪರಿಧಿಯೊಳಗಿನ ಬದುಕುಗಳ ನಿಷ್ಕಳಂಕ ನಡೆಯು ತನ್ನಷ್ಟಕ್ಕೆ ತಾನೇ ಚೈತನ್ಯವೂ ಸೋಜಿಗವೂ ಆಗುವ ಚಿತ್ರಗಳು ಇಲ್ಲಿ ಕಣ್ಣಿಗೆ ಕಟ್ಟುತ್ತವೆ.

About the Author

ಬೆಟಗೇರಿ ಕೃಷ್ಣಶರ್ಮ (ಆನಂದಕಂದ)
(16 April 1900 - 30 October 1982)

ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ 1900ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..  ಕೃಷ್ಣಶರ್ಮರು 12ನೇ  ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ  ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು  ಹಾಗೂ  ಮರು ವರ್ಷವೇ ಪತ್ನಿ ತೀರಿ ಹೋದರು. 5ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ 5 ...

READ MORE

Related Books