ಮನಸು ಅಭಿಸಾರಿಕೆ

Author : ಶಾಂತಿ ಕೆ. ಅಪ್ಪಣ್ಣ

Pages 194

₹ 140.00




Year of Publication: 2016
Published by: ಛಂದ ಪುಸ್ತಕ
Address: ಛಂದ ಪುಸ್ತಕ, 1-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರೋಡ್, ಬೆಂಗಳೂರು- 560076
Phone: 9844422782

Synopsys

ಲೇಖಕಿ ಶಾಂತಿ ಕೆ. ಅಪ್ಪಣ್ಣ ಅವರ ಕಥಾ ಸಂಕಲನ ’ಮನಸು ಅಭಿಸಾರಿಕೆ’.

ಇವರ ಅನೇಕ ಕತೆಗಳು ಆಧುನಿಕತೆಯ ಬಗ್ಗೆ ಮುಖಮಾಡಿವೆ. ಇಂದಿನ ಯುವಕ – ಯುವತಿಯರಿಗೆ ಮತ್ತು ಬರಲಿರುವ ಮುಂದಿನ ಪೀಳಿಗೆಯನ್ನು ಬದಲಾಗುತ್ತಿರುವ ಆಧುನಿಕತೆಯ ಬಗ್ಗೆ ಎಚ್ಚರಿಸುವ ಕರೆಗಂಟೆಯೂ ಈ ಕೃತಿಯಲ್ಲಿರುವಂತದ್ದು. ಬದುಕಿನ ಬಾಹ್ಯವನ್ನು ಆವರಿಸುವ ಕೊಳ್ಳುವಾಕ ಸಂಸ್ಕೃತಿಯ ಬಗ್ಗೆ ಕೆಲವು ಪ್ರಸ್ತಾಪಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಆಧುನಿಕ ಮನಸ್ಸುಗಳಿಗೆ ಹೊಸತನವನ್ನೂ, ಹೊಸ ಹಂಬಲವನ್ನೂ ಹುಟ್ಟು ಹಾಕುವ ಪ್ರಯತ್ನವೂ ಇವರ ಕತೆಗಳಲ್ಲಿ ನಡೆದಿದೆ ಎನ್ನಬಹುದು.

ಕತೆಯು ಸಾಗುವ ನಿಟ್ಟಿನಲ್ಲಿ, ಧಾವಂತದ ಹಾದಿಯಲ್ಲಿ ಅಥವಾ ಸಾಮಾಜಿಕ ನ್ಯಾಯದ ಅರಸುವಿಕೆಯಲ್ಲಿ ತಾತ್ವಿಕ ಹುಡುಕಾಟವನ್ನು ಮರೆಯುತ್ತಿರುವ ಹಲವು ಸಂಗತಿಗಳನ್ನು ಮರು ಅವಲೋಕಿಸುವ ಪ್ರಯತ್ನವನ್ನು ’ಮನಸು ಅಭಿಸಾರಿಕೆ’ ಕೃತಿ ಮಾಡಿದೆ.

About the Author

ಶಾಂತಿ ಕೆ. ಅಪ್ಪಣ್ಣ
(07 June 1983)

ಕೊಡಗು ಜಿಲ್ಲೆಯವರಾದ ಶಾಂತಿ ಕೆ. ಆಪ್ಪಣ್ಣ  ಅವರು ವಿಭಿನ್ನ ಕತೆಗಳ ಮೂಲಕ ಓದುಗರ ಗಮನ ಸೆಳೆದಿದ್ದಾರೆ.  ವೃತ್ತಿ ನಿಮಿತ್ತ ಚೆನ್ನೈನಲ್ಲಿ ವಾಸವಾಗಿರುವ ಅವರು 'ಮನಸು ಅಭಿಸಾರಿಕೆ' ಕಥಾ ಸಂಕಲನ ಪ್ರಕಟಿಸಿದ್ದಾರೆ. ಅವರ ಈ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ ಸಂದಿದೆ. ...

READ MORE

Awards & Recognitions

Related Books