ಸವಾರಿ

Author : ಅಮರೇಶ ನುಗಡೋಣಿ

Pages 216

₹ 120.00




Year of Publication: 2007
Published by: ಅಂಕಿತ ಪುಸ್ತಕ
Address: 53. ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 26617100

Synopsys

‘ಸವಾರಿ’ ಲೇಖಕ ಅಮರೇಶ ನುಗಡೋಣಿ ಅವರ ಸಣ್ಣಕತೆಗಳ ಸಂಕಲನ. ಇಲ್ಲಿಯ ಕತೆಗಳು ಹಳ್ಳಿಯ ಬದುಕಿನ ಬೇಗುದಿಗಳನ್ನು ಅಸಹಾಯಕತೆಯನ್ನು ಉಳ್ಳವರ ದರ್ಪ ಹಾಗೂ ನಯ ವಂಚಕತನವನ್ನು ಪ್ರಾದೇಶಿಕ ಭಾಷೆಯಧ್ವನಿ ಮತ್ತು ಅಭಿವ್ಯಕ್ತಿಯ ಮೂಲಕ ಅನಾವರಣಗೊಳಿಸುತ್ತವೆ.

ಆಧುನಿಕ ಸಂಗತಿಗಳು ಹಳ್ಳಿಯ ಅಂತರಾಳಕ್ಕೆ ಇಳಿದು ಮೋಡಿ ಮಾಡುತ್ತಲೇ ,ಕನಸಿನ ಜಗತ್ತನ್ನು ನಿರ್ಮಾಣ ಮಾಡುತ್ತಲೇ, ಅದರ ಒಳಗಿನಿಂದ ಇಟುಕುತ್ತಲೇ, ಬದುಕಿನ ಖುಷಿ ಮತ್ತು ವ್ಯಂಗ್ಯಗಳನ್ನು ಕತೆಯನ್ನಾಗಿಸುತ್ತವೆ. ಧ್ಯಾನಸ್ಥ ಸ್ಥಿತಿಯೊಂದು ಎಲ್ಲರನ್ನು ಒಂದುಗೂಡಿಸುತ್ತ ಒಳಗನ್ನು ಹೊರಗಿನಿಂದ ಹೊರಗನ್ನು ಒಳಗಿನಿಂದ ನೋಡುವ ವಿಶಿಷ್ಟ ಸನ್ನಿವೇಶವನ್ನು ನಿರ್ಮಾಣ ಮಾಡುತ್ತವೆ.

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Related Books