ಸುಪ್ರೀತ್ ತಮ್ಮ ಕಿರು ವಯಸ್ಸಿನಲ್ಲೇ 'ಸಾವು' ಎಂಬ ಗಂಭೀರ ವಿಷಯ ವಸ್ತುವನ್ನು ಕೇಂದ್ರವಾಗಿಸಿಕೊಂಡು, ಎರಡು ವ್ಯಕ್ತಿಗಳ ಸಾವಿನ ಜಿಜ್ಞಾಸೆಯ ವೈರುಧ್ಯವನ್ನು ತೆರೆದಿಟ್ಟಿದ್ದಾರೆ. ಒಬ್ಬಳು ವಿಧವೆಯ ಸುತ್ತಾ, ಸುತ್ತುವ ಕತಾಹಂದರದಿಂದ ಪಂಚಪ್ರಾಣ, ಕರ್ಮ ಮುಗಿದ ಕೂಡಲೇ ದೇಹ ತ್ಯಾಗ ಮಾಡುವ ಯೋಗಿಗಳ ಕುರಿತು ಪಾತ್ರಗಳ ಮೂಲಕ ಚರ್ಚಿಸಿದ್ದಾರೆ ಲೇಖಕರು. ಇಂತಹ ಸಂಕೀರ್ಣ ವಿಷಯ ವಸ್ತುವನ್ನಿಟ್ಟುಕೊಂಡು ಉತ್ತಮ ಕಾದಂಬರಿ ರಚಿಸಿರುವುದು ಅವರ ಪ್ರಬುದ್ಧತೆಗೆ ಸಾಕ್ಷಿ.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುಪ್ರೀತ್ ಕೆ.ಎನ್. ಅವರು ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರ ನಾಲ್ಕು ಕಾದಂಬರಿಗಳು ಪ್ರಕಟವಾಗಿವೆ. ...
READ MORE