ಸುಪ್ರೀತ್ ತಮ್ಮ ಕಿರು ವಯಸ್ಸಿನಲ್ಲೇ 'ಸಾವು' ಎಂಬ ಗಂಭೀರ ವಿಷಯ ವಸ್ತುವನ್ನು ಕೇಂದ್ರವಾಗಿಸಿಕೊಂಡು, ಎರಡು ವ್ಯಕ್ತಿಗಳ ಸಾವಿನ ಜಿಜ್ಞಾಸೆಯ ವೈರುಧ್ಯವನ್ನು ತೆರೆದಿಟ್ಟಿದ್ದಾರೆ. ಒಬ್ಬಳು ವಿಧವೆಯ ಸುತ್ತಾ, ಸುತ್ತುವ ಕತಾಹಂದರದಿಂದ ಪಂಚಪ್ರಾಣ, ಕರ್ಮ ಮುಗಿದ ಕೂಡಲೇ ದೇಹ ತ್ಯಾಗ ಮಾಡುವ ಯೋಗಿಗಳ ಕುರಿತು ಪಾತ್ರಗಳ ಮೂಲಕ ಚರ್ಚಿಸಿದ್ದಾರೆ ಲೇಖಕರು. ಇಂತಹ ಸಂಕೀರ್ಣ ವಿಷಯ ವಸ್ತುವನ್ನಿಟ್ಟುಕೊಂಡು ಉತ್ತಮ ಕಾದಂಬರಿ ರಚಿಸಿರುವುದು ಅವರ ಪ್ರಬುದ್ಧತೆಗೆ ಸಾಕ್ಷಿ.
ಸುಪ್ರೀತ್ ಕೆ.ಎನ್ ಮೂಲತಃ ಬೆಂಗಳೂರಿನವರು. 1991 ಅಕ್ಟೋಬರ್ 4 ರಂದು ಜನಿಸಿದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ವಾಹಿನಿಯೊಂದರ ಸಾಮಾಜಿಕ ಜಾಲತಾಣ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲೇ ’ಕಾದಂಬರಿ’, ಸ್ಟ್ಯಾಪಿಂಗ್ ಮತ್ತು ಮಂದಿರ ಮಸೀದಿ ಕಾದಂಬರಿಗಳನ್ನು ರಚಿಸಿದ್ದ ಸುಪ್ರೀತ್, ನಂತರದ ದಿನಗಳಲ್ಲಿ ತರ್ಕ ಮತ್ತು ಸಾವು ಕೃತಿಗಳನ್ನು ರಚಿಸಿದರು. ಆಧ್ಯಾತ್ಮ, ತತ್ವಶಾಸ್ತ್ರ ಮತ್ತು ವಿಜ್ಞಾನ ವಿಷಯಗಳಲ್ಲಿ ಇವರಿಗೆ ಅಪಾರವಾದ ಆಸಕ್ತಿ. ಇವರು ಅವರ ಕಾದಂಬರಿಗಳಲ್ಲಿ ಈ ತಲೆಮಾರಿನ ಹುಡುಗ ಹುಡುಗಿಯರ ಮುಂದುವರೆದ ಜೀವನ ಭಾಗವನ್ನು ತೆರೆದಿಡುತ್ತಿದ್ದಾರೆ. ತರ್ಕ ಕಾದಂಬರಿಯಲ್ಲಿ ಶ್ರೀಚಕ್ರ ಯಂತ್ರ, ಫಿಸಿಕ್ಸ್, ಮಂತ್ರಗಳ ಹಿಂದಿರುವ ವಿಜ್ಞಾನ, ...
READ MORE