ಚುಕ್ಕಿ ಮದುವೆ ಪ್ರಸಂಗ

Author : ಅಮರೇಶ ನುಗಡೋಣಿ

Pages 142

₹ 150.00




Year of Publication: 2017
Published by: ದೇಸಿ ಪುಸ್ತಕ ಪ್ರಕಾಶನ
Address: ದೇಸಿ ಪುಸ್ತಕ ಪ್ರಕಾಶನ, #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040
Phone: 9845096668

Synopsys

ಚುಕ್ಕಿ ಮದುವೆ ಪ್ರಸಂಗ ಅಮರೇಶ ನುಗಡೋಣಿ ಅವರ ಸಣ್ಣ ಕಥೆಗಳ ಸಂಕಲನ. 

’ಚುಕ್ಕಿ ಮದುವೆ ಪ್ರಸಂಗ’ ಕೃತಿ  ಕಳೆದ ಮೂರು ದಶಕಗಳಿಂದ ನಿರಂತರವಾಗಿ , ನಿಷ್ಠೆಯಿಂದ ಬರೆಯುತ್ತಿರುವ ಅಮರೇಶ ನುಗಡೋಣಿ ಅವರಿಗೆ ಲೋಕವನ್ನು ಕಾಣುವ, ಕಂಡದ್ದನ್ನು ವಿವರಿಸುವ, ಚಿತ್ರವನ್ನು ನೀಡುವ ಕಥನ ಕಾಯಕವೇ ಭಾಷೆಯಾಗಿದೆ. ಅವರ ಕಥಾಲೋಕವನ್ನು ಪ್ರವೇಶಿಸಿದ ಕೂಡಲೇ ಶಬ್ದಗಳು, ನಿಶ್ಯಬ್ದ ಪ್ರತಿಮೆಗಳಾಗಿ ಅನುಭವಕ್ಕೆ ಆಕಾರ ನೇಯತೊಡಗುತ್ತವೆ. ಓದುಗರಿಗೆ ಅವರ ರಚನೆಗಳ ತಾತ್ವಿಕ ಸಹವಾಸದ ಸಹಯೋಗದ ಯಾತ್ರೆ ಎಂದೆನಿಸದೆ ಸಶರೀರ ವಾಸ್ತವ ಎಂದಿನಿಸುತ್ತದೆ.

ವಚನ ಯುಗದ ತತ್ವಗಳು ಅವರ ಕಥಾ ಜೀವಿತ ಜಗತ್ತಿನ ಮಾತಿನ ಲಯದಲ್ಲಿ ಸಹಜವಾಗಿ ಬೆರೆತುಹೋಗುವುದರಿಂದ ಅನಾಯಾಸವಾಗಿ ಪಾತ್ರಗಳ ಅಂತಸತ್ವವಾಗಿ ಬೆಳಗುತ್ತವೆ. ಅಂದರೆ ಅವರ ಭಾಷೆ ಮತ್ತು ಭಾವ ಬೇರೆ ಬೇರೆಯಲ್ಲ, ಸಂಪ್ರದಾಯಿಕ ಹಿಂಸೆ ಮತ್ತು ಆಧುನಿಕ ವಿಕಾರಗಳು ಪಾವಿತ್ರ್ಯ ಪಾಶಕ್ಕೆ ತೊಡಗಿದಾಗಲೆಲ್ಲಾ ತಮ್ಮ ಅಪಾರ ಸಂಯಮವನ್ನೇ ಪ್ರತಿರೋಧದ ಅಸ್ತ್ರವನ್ನಾಗಿ ಪ್ರಯೋಗಿಸುವ ಮನುಷ್ಯರ ಧಾರಣಶಕ್ತಿಯನ್ನು ಅಮರೇಶರು ಮತ್ತೆ ಮತ್ತೆ ಪರೀಕ್ಷೆಗೆ ಒಡ್ಡುತ್ತಾರೆ.

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Conversation

Related Books