ಎಪ್ಪತ್ತರ ದಶಕದ ಕಥೆ

Author : ಯು.ಆರ್. ಅನಂತಮೂರ್ತಿ

Pages 72

₹ 75.00




Year of Publication: 2014
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಎಪ್ಪತ್ತರ ದಶಕದ ಕನಸುಗಳು, ಪ್ರಜಾತಂತ್ರದ ವೈಫಲ್ಯ, ಪುನಸ್ಸೇತನ ಇವೆಲ್ಲವನ್ನೂ ಒಳನೋಟದಿಂದ ನೋಡಬೇಕೆಂಬ ಲೇಖಕನ ಆಸೆಗಳು ಈ ಕಥೆಗಳಲ್ಲಿವೆ. ಯಾಕೆಂದರೆ ಈ ದಶಕ ನಾವು ಕನಸುಗಳನ್ನು ಕಂಡ ಕಾಲ, ಕನಸುಗಳು ಭವಾದ ಕಾಲ, ಕ್ರಾಂತಿಕಾರರೆಂದು ಭಾವಿಸಿಕೊಂಡ ಮಧ್ಯಮವರ್ಗ ಬ್ಯಾಡ್ ಫೈಟ್ ನಲ್ಲಿ ಬದುಕಿದ ಕಾಲ. ಈ ಬ್ಯಾಡ್‌ಫೈಟ್ ಲೇಖಕನೊಬ್ಬ ತನ್ನ ಹೊರಗೆ ಕಾಣುತ್ತಿರುವುದು ಮಾತ್ರವಲ್ಲ; ತನ್ನ ಒಳಗೂ ಕಾಣುತ್ತಿರುವುದು. ಗಾಂಧಿಯವರ ಮಾರ್ಗವನ್ನು ಪುನಚೇತನಗೊಳಿಸಲು ಜಯಪ್ರಕಾಶ ನಾರಾಯಣರು ವಿಫಲರಾದರು. ರಾಜಕಾರಣದ ಜಾಗವನ್ನು ಪುಂಡುಪೋಕರಿಗಳು ಆಕ್ರಮಿಸಿದರು. ಸ್ವಜಾತಿಯ ಹೆಸರಲ್ಲೇ ಜಾತಿಯ ಕ್ರಾಂತಿಯನ್ನು ಮಾಡಿದರು. 'ಎಪ್ಪತ್ತರ ದಶಕದ ಕಥೆ' ಆ ದಶಕದ ವಿದ್ಯಮಾನಗಳನ್ನು ವ್ಯಕ್ತಿಗಳ ಖಾಸಗಿ ಬದುಕಿನ ಆಕಾಂಕ್ಷೆಗಳು ಮತ್ತು ತುಮುಲಗಳ ಮೂಲಕ ಗ್ರಹಿಸುವ ಪ್ರಯತ್ನ ಮಾಡುತ್ತದೆ. ಅನಂತಮೂರ್ತಿಯವರು ವಿಡಂಬನಾತ್ಮಕವಾಗಿ ಬಳಸುವ ಎಡಪಂಥೀಯ ತಾತ್ವಿಕ ಭಾಷೆ ಪಾತ್ರಗಳ ಗ್ರಹಿಕೆ-ತಿಳುವಳಿಕೆಗಳು ಎಷ್ಟು ಸವಕಲಾಗಿದೆ ಎಂಬುದನ್ನು ತೋರಿಸುವುದರ ಜೊತೆಗೆ, ಅದೇ ಆತ್ಮವಂಚನೆಯ ದಾರಿಯಾಗಿಯೂ ಪರಿಣಮಿಸುತ್ತದೆ ಎನ್ನುವುದನ್ನು ವಿಶದಪಡಿಸುತ್ತದೆ.

About the Author

ಯು.ಆರ್. ಅನಂತಮೂರ್ತಿ
(21 December 1932 - 22 August 2014)

ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...

READ MORE

Related Books