ಚಾಕಣದ ಸುಭದ್ರೆ

Author : ಸಿ. ಸುವರ್ಣ (ಸುವರ್ಣ ಶಿವಪ್ರಸಾದ್)

Pages 204

₹ 175.00




Year of Publication: 2018
Published by: ಮಾಣಿಕ್ಯ ಪ್ರಕಾಶನ
Address: #50, ಪುಟ್ಟ ಬಿಂದು ನಿಲಯ, 5ನೇ ಕ್ರಾಸ್, ತೇಜೂರ್ ರಸ್ತೆ, ಶಾಂತಿನಗರ, ಹಾಸನ- 573201
Phone: 9483470794

Synopsys

‘ಚಾಕಣದ ಸುಭದ್ರೆ’ ಲೇಖಕಿ ಸುವರ್ಣ ಶಿವಪ್ರಸಾದ್ ಅವರ ಕತಾಸಂಕಲನ. ಇಲ್ಲಿಯ ಕತೆಗಳು ಮಹಿಳೆಯರ ನೋವಿನ ಒಳನೋಟವನ್ನು ನೀಡುತ್ತವೆ. ಚಾಕಣದ ಸುಭದ್ರೆ ಕತೆಯು ದಲಿತ ಮಹಿಳೆಯ ಬದುಕು ಬವಣೆಯ ಚಿತ್ರಣವಿದ್ದರೂ ಸಹ ಪುರುಷಪ್ರಧಾನ ಸಮಾಜದಲ್ಲಿ ಹೆಣ್ಣುವಿದ್ಯಾವಂತೆಯಾಗಿ ಪುರುಷರಿಗೆ ಸರಿಸಮಾನವಾಗಿದ್ದಾಳೆ. ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಏನೆಲ್ಲಾ ನೋವು ಅನುಭವಿಸಬೇಕು ಎನ್ನುವುದರ ಜೊತೆಗೆ ಅವಳ ಬದುಕು ಹೋರಾಟ, ಅವಳ ಹೋರಾಟ ಅನೇಕ ಸುಳಿಗಳಲ್ಲಿ ಸ್ಥಿರವಾಗಿ ನಿಲ್ಲುತ್ತಾ ಬೆಳೆಯುತ್ತ ಶಕ್ತವಾಗುತ್ತ ನಡೆದು ತನ್ನದೇ ಆದ ಹೆಜ್ಜೆ ಗುರುತು ಮೂಡುತ್ತವೆ. ಅಂತಹ ಗಟ್ಟಿಕತೆಗಳು ಈ ಸಂಕಲನದಲ್ಲಿವೆ. ಇಲ್ಲಿ ಚಾಕಣದ ಸುಭದ್ರೆ, ಒಡಲಿನ ಕಿಚ್ಚು, ಚಂಚಲೆ, ನಿರೀಕ್ಷೆ, ಆಸರೆ ಮತ್ತು ಗಾಯ ಎಂಬ ಆರು ಕತೆಗಳು ಸಂಕಲನಗೊಂಡಿವೆ.

About the Author

ಸಿ. ಸುವರ್ಣ (ಸುವರ್ಣ ಶಿವಪ್ರಸಾದ್)
(23 March 1972)

ಲೇಖಕಿ ಸಿ.ಸುವರ್ಣ ಅವರು 1972 ಮಾರ್ಚ್ 23 ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಚನ್ನಾಪುರ ಗ್ರಾಮದಲ್ಲಿ ಜನಿಸಿದರು. ತಂದೆ-ಚಿಕ್ಕಯ್ಯ, ತಾಯಿ- ಇಂದಿರಾ. ಹಾಸನದಲ್ಲಿ ಎಂ.ಎ.ಸ್ನಾತಕೋತ್ತರ ಪದವಿ ಪಡೆದ ಅವರು ಹಾಸನವಾಣಿ ಹಾಗೂ ಜನತಾಮಾಧ್ಯಮ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರೆಕರ್ತೆಯಾಗಿ ಕಾರ್ಯನಿರ್ವಹಿಸಿದ ಇವರು ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಅವರನ್ನು ವಿವಾಹವಾಗಿದ್ದಾರೆ. ಇವರ ಕೃತಿಗಳು ‘ಬದುಕುಮಾಯೆ’ ಲೇಖನ ಸಂಗ್ರಹ, ‘ಚಾಕಣದ ಸುಭದ್ರೆ’ ನೀಳ್ಗತೆಗಳು 2018 ರಲ್ಲಿ ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಧನಸಹಾಯದಿಂದ ಪ್ರಕಟವಾಗಿವೆ. ಜೊತೆಗೆ ‘ಒಂದ್ಕಥೆ’ ಎಂಬ ಕಾದಂಬರಿ 2019ರಲ್ಲಿ ಮೈಸೂರಿನ ಅಭಿರುಚಿ ...

READ MORE

Related Books