ಹಿಂದೂ ಮುಸ್ಲಿಂ ಮತ್ತು ಇತರ ಕತೆಗಳು

Author : ಪಾ.ವೆಂ. ಆಚಾರ್ಯ

Pages 104

₹ 42.00




Year of Publication: 2002
Published by: ಸುಮಂತ ಪ್ರಕಾಶನ
Address: # 1-183, ಉಪ್ಪಿನಕೋಟೆ, ಬ್ರಹ್ಮಾವರ, ಉಡುಪಿ ಜಿಲ್ಲೆ-576213

Synopsys

ಪಾ.ವೆಂ. ಆಚಾರ್ಯರ ಸಮಗ್ರ ಸಂಪುಟದಡಿ ಪ್ರಕಟಿಸಿದ ಕೃತಿ-ಹಿಂದೂ ಮುಸ್ಲಿಂ ಮತ್ತು ಇತರ ಕತೆಗಳು. ಲೇಖಕರು ಪಾ.ವೆಂ. ಆಚಾರ್ಯ. ಡಾ. ಶ್ರೀನಿವಾಸ ಹಾವನೂರು ಅವರು ಪ್ರಧಾನ ಸಂಪಾದಕರು.

ಕರುಳಿನ ಮರುಳು, ಅಪರ ಜೀವನ, ಪಿಶಾಚಿಯ ತವರು ಮನೆ, ಕಣ್-ಸನ್ನೆ, ಹಿಂದೂ ಮುಸ್ಲಿಂ, ಒಂದು ಅ-ನೀತಿ ಕಥೆ, ವಾಕಿಂಗ್ ಸ್ಟಿಕ್ ನ ಪ್ರಕರಣ ಸೇರಿದಂತೆ ಒಟ್ಟು 12 ಕತೆಗಳು ಇಲ್ಲಿ ಸಂಕಲನಗೊಂಡಿವೆ. ಈ ಕಥೆಗಳಲ್ಲಿ ದೂರದೃಷ್ಟಿ ಇದೆ. ವಾಸ್ತವಕ್ಕೆ ತೀರಾ ಹತ್ತಿರದ ಕಥಾ ವಸ್ತುವಿದೆ. ಸಾಮಾಜಿಕ ವಿದ್ಯಮಾನಗಳ ಗಂಭೀರ ಚರ್ಚೆ-ಚಿಂತನೆಯೂ ಇದೆ. ವಿಶಾಲ ಲೋಕಾನುಭವವೂ ಇದೆ. ಪ್ರಕೃತಿ ಸಹಜತೆಯ ತತ್ವವಿದೆ. ಈ ಕಥೆಗಳು ಓದುರಗರ ಗಮನ ಸೆಳೆಯುತ್ತವೆ.

About the Author

ಪಾ.ವೆಂ. ಆಚಾರ್ಯ
(06 February 1915 - 04 May 1992)

ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್'  ಸೇರಿದರು.  ...

READ MORE

Reviews

ಹೊಸತು - ಸೆಪ್ಟೆಂಬರ್‌-2002  

ಕಸ್ತೂರಿ ಮಾಸಪತ್ರಿಕೆ ಮೂಲಕ ಒಂದು ಹೊಸ ವಿಚಾರ ವಂತಿಕೆಯನ್ನು ಪ್ರಾರಂಭಿಸಿದ ಲಾಂಗೂಲಾಚಾರ್ಯ, ಪಾ. ವೆಂ. ಅವರನ್ನು ಸಣ್ಣ ಕತೆಗಳ ಮೂಲಕ ಮತ್ತೆ ಭೇಟಿಯಾಗುವ ಅವಕಾಶ. ನಮ್ಮನ್ನು ಕೆಲ ದಶಕಗಳ ಹಿಂದಕ್ಕೆ ಕರೆದೊಯ್ಯುವ ಇಲ್ಲಿನ ಕಥೆಗಳನ್ನು ಅಂದಿನ ಪರಿಸರದೊಂದಿಗೆ ಅರ್ಥೈಸಿದಾಗ ಅವು ತಮ್ಮ ನೈಜ ಸಂದೇಶಗಳನ್ನು ಬಿಟ್ಟುಕೊಡುತ್ತವೆ. ಬಹುದೊಡ್ಡ ಮೊತ್ತದ - ಮೌಲ್ಯದ ಸಾಹಿತ್ಯ ಅವರಿಂದ ರಚಿತವಾಗಿದ್ದು ಅದರ ಅಲೆಗಳು ಇತ್ತೀಚಿನ ತರಂಗ ಪತ್ರಿಕೆಯವರೆಗೂ ಬಂದು ತಲುಪಿದೆ.

Related Books