ಲಾಟರಿ

Author : ಮಚ್ಚೇಂದ್ರ ಪಿ.ಅಣಕಲ್.

Pages 92

₹ 50.00




Year of Publication: 2009
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಬಸವ ಪ್ರಕಾಶನ ಮುಖ್ಯ ಬೀದಿ ಕಲಬುರಗಿ 585101
Phone: 9449825431

Synopsys

ಲಾಟರಿ- ಲೇಖಕ ಮಚ್ಛೇಂದ್ರ ಪಿ. ಅಣಕಲ್ ಅವರ ಕಥೆಗಳ ಸಂಕಲನ. ದಲಿತ ಸಂವೇದನೆಯ ಒಟ್ಟು 11 ಕಥೆಗಳಿವೆ. *ಲಾಟರಿ* ಕತೆ ರಾಜ್ಯ ಮಟ್ಟದ ಸಂಯುಕ್ತ ಕರ್ನಾಟಕ ತಿಂಗಳ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ.  ಇಲ್ಲಿಯ ಬಹುತೇಕ ಕತೆಗಳಲ್ಲಿ ದಲಿತ ಜನಾಂಗದ ಅಸ್ಪೃಶ್ಯತೆ,ಹಸಿವು,ಸೇಡು, ಜೀತಗಾರಿಕೆ ಮೊದಲಾದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತವೆ.
ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ ಬೆನ್ನುಡಿ ಬರೆದು ‘ ಇವರ ಕತೆಗಳು ಸಾಮಾಜಿಕತೆಯ ನ್ಯಾಯಪರವಾದ ತಾತ್ವಿಕ ಚಿಂತನೆಗಳಿಂದ ಕೂಡಿವೆ. ದಲಿತರ ನೋವು ಮಾನವೀಯ ಅಂತಃಕರುಣೆ ಬುದ್ಧನ ಶಾಂತಿ, ಶರಣರ ಸಮಾನತೆ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯಕ್ಕಾಗಿ ಕತೆಗಳು ತುಡಿಯುತ್ತಿವೆ." ಎಂದು ಪ್ರಶಂಸಿಸಿದ್ದಾರೆ. 

About the Author

ಮಚ್ಚೇಂದ್ರ ಪಿ.ಅಣಕಲ್.
(12 June 1979)

ಮಚ್ಚೇಂದ್ರ ಪಿ ಅಣಕಲ್ ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದಲ್ಲಿ 12-06-1979 ರಂದು ಜನಿಸಿದರು. ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರು. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಎಂ.ಇಡಿ ಪದವೀಧರರು.  ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ 'ಲಾಟರಿ'ಕತೆ  ಬಹುಮಾನ ಪಡೆದಿದೆ . 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ  ...

READ MORE

Related Books