ಅತಿ ಸಣ್ಣಕತೆಗಳು ನೀಡುವ ದೊಡ್ಡ ಅನುಭವ ವರ್ಣಿಸಲಸದಳ. ಹೀಗೆ ದೊಡ್ಡ ಅನುಭವ ನೀಡುವ ನೂರಾ ಅರವತ್ತು ಪುಟ್ಟ ಕಥೆಗಳ ಗುಚ್ಛ ಇದು. ಕೆಲವೇ ಪದಗಳಲ್ಲಿ ಓದುಗರನ್ನು ಪ್ರಭಾವಿಸುವ ಕತೆಗಳು ಸಮಯದ ಅಭಾವ ಎನ್ನುವವರಿಗೆ ಇಷ್ಟವಾಗಬಲ್ಲವು.
ಅಂತಹ ಒಂದು ಅತಿಸಣ್ಣ ಕತೆ ಹೀಗಿದೆ: ಮೇಲಿನ ಕೋಣೆಗೆ ಇರುವುದು ಹನ್ನೆರಡು ಮೆಟ್ಟಿಲುಗಳಲ್ಲ. ಹದಿಮೂರು ಮೆಟ್ಟಿಲುಗಳು ಅಂತ ಅದೆಷ್ಟು ಬಾರಿ ತಿದ್ದಿ ಹೇಳಿಕೊಟ್ಟರೂ ಅವನು ಹನ್ನೆರಡು ಅಂತಲೇ ಹೇಳುತ್ತಿದ್ದ. ಅವನ ಆಪ್ತಮಿತ್ರರಲ್ಲಿ ಒಬ್ಬರಾದ ಹಿಂದಿನ ಬೀದಿಯ ಡಿಸೋಜ ತೀರಿಕೊಂಡಾಗ ಎಚ್ಚರವಾಗಿಯೇ ತನ್ನ ವೀಲ್ ಛೇರಿನಲ್ಲಿ ಕುಳಿತು ಆಡುತ್ತಿದ್ದ. ಅಂದಿನಿಂದ ಮೇಲಿನ ಕೋಣೆಗೆ ಹನ್ನೊಂದು ಮೆಟ್ಟಿಲುಗಳು ಎನ್ನತೊಡಗಿದ...
ಕಾದಂಬರಿಗಾರ್ತಿಯಾದ ಆಶಾ ರಘುರವರು ಹುಟ್ಟಿದ್ದು 1979ರ ಜೂನ್ 18 ನೇ ತಾರೀಖಿನಂದು. ಬೆಂಗಳೂರಿನವರೇ ಆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ಇದೀಗ ಪೂರ್ಣ ಪ್ರಮಾಣದಲ್ಲಿ ಸಾಹಿತ್ಯ ಕೃಷಿಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. 'ಆವರ್ತ', 'ಗತ', 'ಮಾಯೆ', 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು', 'ಚೂಡಾಮಣಿ', 'ಕ್ಷಮಾದಾನ', 'ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು' ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ...
READ MORE