ಅಮೃತಬಳ್ಳಿ ಕಷಾಯ

Author : ಜಯಂತ ಕಾಯ್ಕಿಣಿ

Pages 195

₹ 60.00




Year of Publication: 1996
Published by: ಕನ್ನಡ ಸಂಘ
Address: ಕ್ರೈಸ್ಟ್ ಕಾಲೇಜು, ಡಾ. ಎಂ.ಎಚ್. ಮರೀಗೌಡ ರಸ್ತೆ, ಬೆಂಗಳೂರು 21

Synopsys

ಕವಿ , ಲೇಖಕ, ಗೀತರಚನಾಕಾರರಾದ ಜಯಂತ್ ಕಾಯ್ಕಿಣಿ ಅವರ ಕಥಾ ಸಂಕಲನ ’ಅಮೃತಬಳ್ಳಿ ಕಷಾಯ’.

ಕಾಯ್ಕಿಣಿ ಅವರ ಅಮೃತಬಳ್ಳಿ ಕಷಾಯ ಮತ್ತು ಇತರ ಕಥೆಗಳು’ ಇಲ್ಲಿನ ಅನೇಕ ಕಥೆಗಳು ಎಲ್ಲೊ ಒಂದು ಕಡೆ, ಭಾರತೀಯ ಬದುಕಿಗೆ ಕೈಗನ್ನಡಿಯಂತೆ ಪಾತ್ರಗಳನ್ನು ತೆರೆದಿಡುತ್ತದೆ. ಹಾಲೀನ ಮೀಸೆ, ತನ್ಮಯಿಯ ಸೂಚಿ, ಮಿಥನ್ ನಂಬರ್‍ ಟೂ, ಸಮ್ಮೋಚನ ಶಿವರಾತ್ರಿ, ಚಂದ್ರಕಾಂತನ ದೀಪೋತ್ಸವ, ಕೊಂಡಿ, ಸುಮಿತ್ರೆಗೊಂದು ಸುದ್ದಿ, ಅಂತಃಪುರದೊಳಗೆ, ಪ್ರಕಾಶ ವರ್ಷ, ಡೈಮಂಡ್ ಸರ್ಕಸ್ಸಿನಲ್ಲಿಒಂದು ಹೆರಿಗೆ,  ಮೋಗ್ರಿಯ ಸತ್ಸಂಗ, ಚಂದಿರನೇತಕೆ ಓಡುವನಮ್ಮ, ಸಂತೆಯ ದಿನ, ಅಮೃತಬಳ್ಳಿ ಕಷಾಯ ಮುಂತಾದ ಕಥೆಗಳು ಈ ಕೃತಿಯಲ್ಲಿದೆ.

About the Author

ಜಯಂತ ಕಾಯ್ಕಿಣಿ
(24 January 1955)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...

READ MORE

Related Books