ಕಿರಗೂರಿನ ಗಯ್ಯಾಳಿಗಳು

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 120

₹ 90.00

Buy Now


Year of Publication: 2013
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

1991ರಲ್ಲಿ ಪ್ರಕಟವಾದ ’ಕಿರಗೂರಿನ ಗಯ್ಯಾಳಿಗಳು’ ಸಂಕಲನದಲ್ಲಿ 'ಕೃಷ್ಟೇಗೌಡನ ಆನೆ', 'ಮಾಯಾಮೃಗ', ’ರಹಸ್ಯ ವಿಶ್ವ' ಎಂಬ ನಾಲ್ಕು ಕತೆಗಳಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಸೃಜನಶೀಲ ಕೃತಿ ಪ್ರಶಸ್ತಿ (1992) ಪಡೆದಿದೆ. ಮೊದಲನೆ ಕತೆಯಾದ 'ಕಿರಗೂರಿನ ಗಯ್ಯಾಳಿಗಳು' ಸ್ತ್ರೀವಾದಿಗಳಿಂದ ತುಂಬ ಪ್ರಶಂಸೆಗೆ ಪಾತ್ರವಾಗಿದೆ. ಹಿಂದಿ, ಇಂಗ್ಲಿಷ್, ಮಲಯಾಳಂ, ಮರಾಠಿ, ಕೊಡವ ಭಾಷೆಗಳಿಗೆ ಅನುವಾದವಾಗಿದೆ. ಎ.ಎನ್.ರಾವ್ ಜಾಧವ್‌ರಿಂದ ನಾಟಕವಾಗಿ ಅನೇಕ ಪ್ರದರ್ಶನ ಕಂಡಿದೆ. ಅದರ ರಂಗಕೃತಿಯೂ ಪುಸ್ತಕವಾಗಿ ಪ್ರಕಟವಾಗಿದೆ (1999), ಸುಮನ ಕಿತ್ತೂರು ಅವರ ನಿರ್ದೇಶನದಲ್ಲಿ ಸಿನೆಮಾ ಕೂಡ ಆಗಿದೆ. 'ಮಾಯಾಮೃಗ' ಕತೆಯು ಆ ಅವಧಿಯಲ್ಲಿ ಪ್ರಕಟವಾದ ರಾಷ್ಟ್ರದ ಅತ್ಯುತ್ತಮ ಹದಿಮೂರು ಕತೆಗಳಲ್ಲಿ ಒಂದೆಂದು ದೆಹಲಿಯ 'ಕಥಾ' ಪ್ರಶಸ್ತಿ ಪಡಿದಿದೆ. ಹಿಂದಿ, ಮರಾಠಿ, ಒರಿಯಾ, ಬಂಗಾಳಿ, ತೆಲಗು, ಇಂಗ್ಲಿಷ್ ಭಾಷೆಗಳಿಗೂ ಅನುವಾದವಾಗಿದೆ. 'ಕೃದ್ದೇಗೌಡನ ಆನೆ' ಇಂಗ್ಲಿಷ್, ಹಿಂದಿ, ಮರಾಠಿ ಭಾಷೆಗಳಿಗೆ ಅನುವಾದಿಸಲ್ಪಟ್ಟಿದೆ. ’ರಹಸ್ಯ ವಿಶ್ವ' ಕಥೆಯಲ್ಲಿ ಚಿಕ್ಕ ಹುಡುಗನೊಬ್ಬ ಸೈಕಲ್ ಕಲಿಯಲು ಹೋಗಿ ಒಬ್ಬಳು ದಡೂತಿ ಹೆಂಗಸಿಗೆ ಢಿಕ್ಕಿ ಹೊಡೆದು ಅವಳ ಸೀರೆ ಸುರುಳಿಯೊಳಗೆ ಸಿಕ್ಕಿಕೊಂಡು ಬಿಡುವುದನ್ನು, ಕುತೂಹಲಿ ಹುಡುಗನೊಬ್ಬ ಆ ಮೂಲಕ ಕಾಣುವ ರಹಸ್ಯ ವಿಶ್ವವನ್ನು ಮಾರ್ಮಿಕವಾಗಿ ಮುಂದಿಡುವ ಕಥೆಯಿದು.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...

READ MORE

Conversation

Related Books