ಮಿಂಚು

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 150




Year of Publication: 1930
Published by: ಶ್ರೀನಿವಾಸ ಮುದ್ರಣಾಲಯ
Address: ಚಿಕ್ಕಪೇಟೆ, ಬೆಂಗಳೂರು.

Synopsys

ಚಿಂತಕ-ಕಾದಂಬರಿಕಾರ ಅ.ನ.ಕೃಷ್ಣರಾಯರ ಕೃತಿ-ಮಿಂಚು. 9 ಕತೆಗಳ ಸಂಕಲನವಿದು. ಅವಳ ಬಾಳು ಎಂಬ ಕಥೆಯನ್ನು ಹೊರತುಪಡಿಸಿ ಮಿಕ್ಕ ಕಥೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕಥೆಗಳ ಕುರಿತು ಲೇಖಕರು ಪ್ರಸ್ತಾವನೆಯಲ್ಲಿ ‘ನನ್ನ ಅಲ್ಪ ಶಕ್ತಿಯು ಆ ನನ್ನ ಅಕ್ಕತಂಗಿಯರ, ಅಣ್ಣ ತಮ್ಮಂದಿರಿಗೆ ಎಷ್ಟು ಸಂತಸವನ್ನೀಯುವುದೋ, ಅವರನ್ನು ದುಃಖಾಗ್ನಿಯಲ್ಲಿ ಬಾಡಿಸುವ ಸಮಾಜದ ಹೃದಯದಲ್ಲಿ ಪ್ರೇಮವೃಕ್ಷವನ್ನು ನೆಡಲೆಷ್ಟು ಸಾಮರ್ಥ್ಯವನ್ನು ತೋರುವುದೋ ಹೇಳಲಾರೆ. ಆದರೆ, ದುಃಖಿಗಳೊಂದಿಗೆ ದುಃಖಿಸಿ ನನ್ನ ಆತ್ಮವು ಮುಂದೆ ಅಡಿ ಇಟ್ಟಿದೆ. ಈ ಎಲ್ಲ ಕಥೆಗಳಿಗೆ ನನ್ನ ಅಂತಃಕರಣವೇ ಸ್ಫೂರ್ತಿ’ ಎಂದು ಸ್ಪಷ್ಟಪಡಿಸಿದ್ದಾರೆ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books