ಭಾವಸರಿತೆ

Author : ಡಿ. ಪದ್ಮನಾಭ

Pages 100

₹ 120.00




Year of Publication: 2020
Published by: ಹೆಚ್ ಎಸ್ ಆರ್ ಎ.ಪ್ರಕಾಶನ

Synopsys

ಕವಿ, ಕತೆಗಾರ ಡಿ.ಪದ್ಮನಾಭ ಅವರ ಮೊದಲ ಕಥಾ ಸಂಕಲನ ಭಾವಸರಿತೆ. ಸಮಾಜಮುಖಿ ವಸ್ತು ಇದೆ. ಹಾಸ್ಯದ ಹೊಳೆಯನ್ನೆ ಹರಿಸಿರುವ ಕರ್ಫ್ಯೂನಲ್ಲಿ ಮದುವೆ,  ಮದುವೆಯ ನಂತರ ನಗರವಾಸಿಯು ಹಳ್ಳಿಗೆ ಹೋದಾಗ ಆಗುವ ಅನುಭವ ಹಾಸ್ಯಪ್ರಸಂಗಗಳು.
ಅತಿಯಾದ ಮುದ್ದಿನಿಂದ ಮಗಳ ಬಾಳು ಹಾಳಾಗುವುದು, ದುರಂತಕ್ಕೆ ಈಡಾದ ಬಾಳಲ್ಲಿ ಆತ್ಮಹತ್ಯೆಗೆ ಯೋಚಿಸಿದೆ ಮತ್ತೆ  ಛಲ, ಆತ್ಮವಿಶ್ವಾಸ ರೂಢಿಸಿ ಎಲ್ಲರ ಮನೆಮಗಳಾಗುವ ನಾಯಕಿಯ ಕಥೆ, ದೇಶವನ್ನು ರಕ್ಷಿಸುವ ಸೈನಿಕರು ತಮ್ಮ ತಾಯಿಯನ್ನು ರಕ್ಷಿಸಲಾಗದೇ ತೊಳಲಾಡುವುದು, ಮೂಲಾನಕ್ಷತ್ರ ಎಂಬ ಕಾರಣಕ್ಕೆ ಕನ್ಯೆಯನ್ನು ವಿರೋಧಿಸುವುದು ಅದನ್ನು ಪ್ರತಿಭಟಿಸುವ ನಾಯಕನ ಕಥೆ, ವಿಧವಾವಿವಾಹದ ಚಿಂತನೆ, ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾಭ್ಯಾಸ ಹಾಳಾಗುವುದು, ತಾನು ಮದುವೆಯಾದರೆ ತಾಯಿಯನ್ನು ನೋಡಿಕೊಳ್ಳುವವರ ಯಾರು ಎಂದು ಯೋಚಿಸಿ ಎಲ್ಲ ಪ್ರಪೋಸಲ್ ಗಳನ್ನೂ ಒಂದೊಂದು ನೃವ ಒಡ್ಡಿ ತಿರಸ್ಕರಿಸುವುದು ಹೀಗೆ ವೈವಿಧ್ಯಮಯ ಕಥಾವಸ್ತುಗಳು  ರಮಣೀಯ ಭಾಷೆಯಲ್ಲಿ ಮೂಡಿಬಂದಿವೃ. ಈ ಕೃತಿಗೆ ರೋಣ ಗಜೇಂದ್ರಗಡ ಸಾಹಿತ್ಯ ಪರಿಷತ್ ನಿಂದ ಉತ್ತಮ ಕಥಾಸಂಕಲನ ಎಂಬ ಪ್ರಶಸ್ತಿ ಲಭಿಸಿದೆ.

About the Author

ಡಿ. ಪದ್ಮನಾಭ
(06 February 1966)

ಕವಿ ಡಿ. ಪದ್ಮನಾಭ ಅವರು ಮೈಸೂರಿನಲ್ಲಿ 1966 ಫೆಬ್ರುವರಿ 06 ರಂದು ಜನಿಸಿದರು. ಅವರ ‘ಹೂಬನ’ ಕವನ ಸಂಕಲನ ಇತ್ತಿಚೆಗೆ ಪ್ರಕಟವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಿಂದಿ ರತ್ನ ಹಾಗೂ ಸಂಸ್ಕೃತ ಸಾಹಿತ್ಯದಲ್ಲಿ ಆಸ್ಥೆ ಉಳ್ಳವರು. ‘ಸಂತೋಷ-ಸಂದೇಶ’, ‘ಭಾವಲಹರಿ’ ಕವನ ಸಂಕಲನಗಳು ಹಾಗೂ ‘ಭಾವಸರಿತೆ’ ಕಥಾಸಂಕಲನ ಪ್ರಕಟವಾಗಿವೆ. ...

READ MORE

Related Books