ಸಾಮಾಜಿಕ ಕಟ್ಟುಪಾಡುಗಳಿಂದಾಗುವ ಹಿಂಸೆಯನ್ನು ವಿರೋಧಿಸುವ, ಎಲ್ಲಿಯೂ ರಾಜಿಯಾಗದ, ಸೋಲನ್ನೊಪ್ಪದ, ನಂಬಿದ ಆದರ್ಶಗಳಿಗಾಗಿ ಬದುಕುವ ಪಾತ್ರಗಳು “ಅರ್ಥ” ಕಥಾಸಂಕಲನದಲ್ಲಿ ನಮ್ಮನ್ನು ಎದುರಾಗುತ್ತವೆ. ಸಾಮಾಜಿಕ ಕಟ್ಟುಪಾಡುಗಳಲ್ಲಿ ತಾನೇ ಬಂದಿಯಾಗಿ, ಸ್ವಗತದಲ್ಲಿ ಪ್ರಶ್ನಿಸುವ ಗೌರಿ ಪಾತ್ರದ ದಿಟ್ಟತನ ಒಂದು ಸ್ಪೂರ್ತಿಯಾಗಿ ನಿಲ್ಲುತ್ತದೆ.
'ಅರ್ಥ' ಕಥೆಯಲ್ಲಿ ಮನೆಯನ್ನು ತೊರೆದು ಪ್ರೀತಿಸಿದವನ ಹಿಂದೆ ಓಡಿಹೋದ ಗೌರಿ ತಾನು ಮೋಸ ಹೋದುದನ್ನು ಬೇಗ ಮನಗಂಡು ತೊಳಲಿಕೆಗೆ ಸಿಲುಕಿಕೊಳ್ಳುತ್ತಾಳೆ. ನಂತರ ಬದುಕಿಗೆ ಕಚ್ಚಿಕೊಂಡು ಹೀಗೆ ಪ್ರಶ್ನಿಸುತ್ತಾಳೆ, "ನಮ್ಮ ಪಕ್ಕದಲ್ಲೇ ನೂರಾರು ಗುಡಿಸಲುಗಳಿವೆ. ಅವುಗಳಲ್ಲಿ ಮಾನವ ಆಕಾರ ಪಡೆದ ಸಾವಿರಾರು ಪ್ರಾಣಿಗಳಿವೆ, ಅವುಗಳೊಳಗೆ ಪ್ರಾಣಿಪ್ರಜ್ಞೆಗಿಂತಲೂ ಕೀಳಾದ ಮನಸ್ಸುಗಳಿವೆ. ಆ ಮನಸ್ಸು ಒಮ್ಮೊಮ್ಮೆ ಪಿಶಾಚಿಯಾಗುತ್ತದೆ. ಇನ್ನೊಮ್ಮೆ ಹಿಂಸ ಪಶುವಾಗುತ್ತದೆ. ಏಕೆ?” ಎಂದು ಪ್ರಶ್ನಿಸುವ ಅವಳ ಮಾತುಗಳಿಗೆ ಜಗತ್ತು ತಲೆತಗ್ಗಿಸಿ, ನಡುಬಗ್ಗಿಸಿ ನಿಂತುಬಿಡುತ್ತದೆ. ಇಲ್ಲಿನ ಹಲವು ಪಾತ್ರಗಳು ಗಂಡಿನ ಕ್ರೌರ್ಯಕ್ಕೆ, ಅನಾದರಕ್ಕೆ ತುತ್ತಾದ ಹೆಣ್ಣುಗಳು ಸೋತು ಮೂಲೆಗುಂಪಾಗದೆ ಸ್ಥೈರ್ಯದಿಂದ ಬದುಕನ್ನು ನಡೆಸುವ ಚಿತ್ರಣಗಳು “ಅರ್ಥ” ಕಥಾ ಸಂಕಲನದ ನೆಲೆಯಾಗಿದೆ.
ಲೇಖಕಿ ಭಾಗೀರಥಿ ಹೆಗಡೆ ಅವರು ಜನಿಸಿದ್ದು, 1948 ಜುಲೈ 23ರಂದು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ತಟ್ಟಿಕೈ ಗ್ರಾಮದವರು. ತಾಯಿ ಗಣಪಿ ಭಟ್ಟ. ತಂದೆ ವೆಂಕಟ್ರಮಣ ಭಟ್ಟ. ಹುಟ್ಟೂರು ಹಾಗೂ ಸಿದ್ದಾಪುರದಲ್ಲಿ ಎಸ್.ಎಸ್.ಎಲ್.ಸಿ ಶಿಕ್ಷಣ ಪಡೆದಿದ್ದಾರೆ. ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಆಸಕ್ತಿಯಿದ್ದ ಭಾಗೀರಥಿ ಅವರು ಹಲವಾರು ಕಥೆ, ಕವನಗಳನ್ನು ಬರೆದಿದ್ದಾರೆ. ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಇವರು ಬರೆದ ಲೇಖನಗಳು ಪ್ರಕಟವಾಗಿವೆ. ಭಾಗೀರಥಿ ಅವರ ಪ್ರಮುಖ ಕೃತಿಗಳೆಂದರೆ ಸ್ವೀಕಾರ, ಅರ್ಥ, ಪ್ರವಾಹ, ಗಿಳಿಪದ್ಮ, ಬೇಟೆ, ಪ್ರತಿಮೆ, ಆಳ, ಹಿಮನದಿ (ಕಥಾ ಸಂಕಲನ), ಚಂದ್ರಗಾವಿ, ಒಂದು ದಿನ (ಕವನ ...
READ MORE