ಬಾರಕ್ಕ ಬೆಳದಿಂಗಳೆ

Author : ಕೇಶವರೆಡ್ಡಿ ಹಂದ್ರಾಳ

Pages 136

₹ 80.00




Year of Publication: 2008
Published by: ಅಂಕಿತ ಪುಸ್ತಕ
Address: # 53 ಶಾಮಸಿಂಗ್ ಸಂಕೀರ್ಣ, ಗಾಂಧಿಬಜಾರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 080 2661 7100

Synopsys

ಖ್ಯಾತ ಕಥೆಗಾರ ಕೇಶವರೆಡ್ಡಿ ಹಂದ್ರಾಳ ಅವರ ಕಥಾ ಸಂಕಲನ-ಬಾರಕ್ಕ ಬೆಳದಿಂಗಳೆ. ಕಳೆದ 25 ವರ್ಷಗಳಿಂದ ಕಥನ-ಕಲೆಯ ಮೂಲಕ ಗ್ರಾಮೀಣ ಬದುಕಿನ ತವಕ ತಲ್ಲಣಗಳನ್ನು ಯಥಾವತ್ತಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕಥೆಗಾರರು-ಹಂದ್ರಾಳ. ಮನುಷ್ಯನ ಅಸಹಾಯಕತೆ, ಮುಗ್ಧತನ, ವಂಚನೆ, ಅದೇ ರೀತಿ ನಗರ ಸಂಸ್ಕೃತಿಯ ಹುಸಿ ಬದುಕು, ನಾಗರಿಕ ಸಮಾಜದ ಮುಖವಾಡ ಹೊತ್ತ ಆಧುನಿಕ ಬದುಕಿನ ಭ್ರಷ್ಟಾಚಾರ, ವಂಚನೆ ಇವೆಲ್ಲವೂ ಕಥೆಗಳಲ್ಲಿ ಕಾಡುವ ಅಂಶಗಳಾಗಿವೆ. ಜಾಗತೀಕರಣದ ಭ್ರಮೆಯಲ್ಲಿ ಆಧುನಿಕ ಜಗತ್ತು ತೇಲಾಡುತ್ತಿರುವಾಗ ವಾಸ್ತವಿಕ ನೆಲೆಗಳು ಕಥೆಗಳ ವಸ್ತುಗಳಾಗಿವೆ.

About the Author

ಕೇಶವರೆಡ್ಡಿ ಹಂದ್ರಾಳ
(22 July 1957)

ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದರು. ತಂದೆ ತಾಯಿ ಇಬ್ಬರೂ ಅನಕ್ಷರಸ್ಥರು . ಕೃಷಿ ಕೆಲಸಗಳನ್ನು ಮಾಡಿಕೊಂಡೇ ಹಂದ್ರಾಳದ ಪ್ರೈಮರಿ ಸ್ಕೂಲು , ಬ್ಯಾಲ್ಯದ ಮಿಡ್ಲಿಸ್ಕೂಲು ಪೂರೈಸಿದ್ದು . ತಾತ ನರಸಿಂಹರೆಡ್ಡಿ ಆಂಧ್ರದ ಅನಂತಪುರ ಜಿಲ್ಲೆಯ ಊರೊಂದರ ಜಮೀನುದಾರ . ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಆ ಸೀಮೆಯ ಶೋಷಕ ಬ್ರಿಟಿಷ್ ಕಲೆಕ್ಟರ್ ನನ್ನು ಖೂನಿ ಮಾಡಿ ರಾತ್ರೋರಾತ್ರಿ ಕರ್ನಾಟಕದ ಕಡೆ ಪ್ರಯಾಣ .  ಕಾಪು ರೆಡ್ಡಿಯಾಗಿದ್ದ ತಾತ ಮದುವೆಯಾಗಿದ್ದು ಕಮ್ಮ ಜಾತಿಯ ಅಜ್ಜಿಯನ್ನು . 1947 ...

READ MORE

Related Books