ಚಾರ್‌ಮಿನಾರ್‌

Author : ಜಯಂತ ಕಾಯ್ಕಿಣಿ

Pages 144

₹ 150.00




Year of Publication: 2012
Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್, ಮುಖ್ಯರಸ್ತೆ, ಬೆಂಗಳೂರು
Phone: 080-26617100/2667755

Synopsys

ಜಯಂತ ಕಾಯ್ಕಿಣಿ ಅವರ ಕಥಾಸಂಕಲನ ‘ಚಾರ್ ಮಿನಾರ್’ -  ಮುಂಬೈ ಎಂಬ ಮಹಾನಗರ ಕುತೂಹಲದ ಕಣ್ಣುಗಳಿಂದ ನೋಡಿದವರು ಅದೆಷ್ಟು ಚಂದ ಅಕ್ಷರಕ್ಕೆ ದುಡಿಸಿಕೊಂಡರೋ? ಮಹಾ ನಗರಗಳಿಗೆ ಹೊಟ್ಟೆಪಾಡಿಗಾಗಿ ಹೊರಟು ನಿಂತಾಗ ಅಲ್ಲಿ ಕಾಣುವುದೆಲ್ಲವೂ ಬದುಕಿನ ನಾಟಕಗಳೆಂದು ಮರೆತು ಬಿಡುತ್ತೇವೆ. ಕಥೆಗಾರ ಹಾಗಲ್ಲ, ಟ್ರಾಫಿಕ್ ಜಾಂ ನ್ನು ಎಂಜಾಯ್ ಮಾಡುತ್ತಾರೆ. ಕಹಿ- ಸಿಹಿ ಘಟನೆಗಳನ್ನು ಕಥೆಯಾಗಿಸುತ್ತಾರೆ. ಬಹುಶಃ ಕಾಯ್ಕಿಣಿಯವರಿಗೆ ಮಾತ್ರ ಒಲಿದಂಥದ್ದು, ಆ ಮಹಾ ನಗರವನ್ನೇ ಫ್ಲೈಯಿಂಗ್ ಕ್ಯಾಮರಾದಂತೆ ದಶ ದಿಕ್ಕುಗಳನ್ನೂ ನೋಡುವ ಅವರ ಗ್ರಹಿಕೆ ಅತಿ ಸೂಕ್ಷ್ಮ. ಒಬ್ಬ ಮಿಡಲ್ ಕ್ಲಾಸ್, ಇನ್ನೊಬ್ಬ ತಳ ವರ್ಗದ ಟಾಕ್ಸಿ ಡ್ರೈವರ್ ಇನ್ನೊಬ್ಬ ಶ್ರೀಮಂತ ಆ ಮಹಾ ಮಳೆಯಲ್ಲಿ ಟ್ರಾಫಿಕ್ ನ ಸಿಕ್ಕಿನಲ್ಲಿ ಬದುಕು ಅರ್ಥೈಸಿಕೊಳ್ಳುವುದೆಷ್ಟು ಚಂದ. ಒಂದು ಮಹಾ ಮಳಡ ಅರ್ಥಾತ್ ನೀರು ಅಷ್ಟು ಸಾಮಾಜಿಕ ಬದಲಾವಣೆ ತರುವ ಆಧುನಿಕ ಶೈಲಿ ಇದು. ನಗರದ ಜಂಜಡಗಳನ್ನೂ ಕಥೆ ಯಾಗಿಸಬಹುದೆಂಬುವುದು ಕಾಯ್ಕಿಣಿಯವರಿಂದ ಕಲಿಬೇಕು. 

About the Author

ಜಯಂತ ಕಾಯ್ಕಿಣಿ
(24 January 1955)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...

READ MORE

Related Books