ಅಗ್ನಿಕನ್ಯೆ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 174

₹ 2.00




Year of Publication: 1947
Published by: ವಿಶ್ವವಾಣಿ ಪ್ರಕಟಣಾ ಮಂದಿರ
Address: ಅನ್ನಪೂರ್ಣ, ವಿಶ್ವೇಶ್ವರ ಪುರಂ, ಬೆಂಗಳೂರು

Synopsys

ಚಿಂತಕ ಅ.ನ.ಕೃಷ್ಣರಾಯರು ಬರೆದ 9 ಕಥೆಗಳ ಸಂಕಲನ-ಅಗ್ನಿಕನ್ಯೆ. ಇಲ್ಲಿಯ ಕೆಲ ಕಥೆಗಳ ಬಗ್ಗೆ ಅಭಿಪ್ರಾಯಪಡುತ್ತಾ ಲೇಖಕರು `ಲೈಂಗಿಕ ವಿಷಯಗಳ ಬಗ್ಗೆ ಮುಚ್ಚುಮರೆ ತೋರಿಸಿ ಜನರ ಅಜ್ಞಾನದ ದುರುಪಯೋಗ ಮಾಡಿಕೊಳ್ಳುವುದು ದೌರ್ಜನ್ಯವಾಗುತ್ತದೆ. ಕೆಲವು ಕಥೆಗಳನ್ನು ವಿಕೃತ ಕಾಮವನ್ನು ಲೈಂಗಿಕ ಮನೋಭಾವದ ಹಿನ್ನೆಲೆಯಲ್ಲಿ ವಿವರಿಸಿದ್ದೇನೆ. ವಿಕೃತ ಕಾಮ, ಲೈಂಗಿಕ ಅನಾಚಾರ ನಮ್ಮಲ್ಲಿ ಇಲ್ಲ ಎಂದು ಕಣ್ಣು ಮುಚ್ಚಿ ಕೂಡುವುದಕ್ಕಿಂತ ಅವುಗಳ ಇರುವಿಕೆಯನ್ನು ಗೊತ್ತು ಹಚ್ಚಿ ಶುದ್ಧೀಕರಿಸುವುದು ಒಳ್ಳೆಯದು’ ಎಂದು ಹೇಳಿದ್ದಾರೆ. ಸಂಕಲನದಲ್ಲಿ ಅನ್ನದ ಕೂಗು, ಪ್ರತಿರೂಪ, ಮಧುರ ಸ್ವಪ್ನ, ಗಿರಿಜವ್ವನ ರೊಟ್ಟಿ ಸೇರಿದಂತೆ 9 ಕಥೆಗಳಿವೆ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books