ಬದುಕು ಮಾಯೆಯ ಮಾಟ

Author : ವಸುಮತಿ ಉಡುಪ

Pages 184

₹ 170.00




Year of Publication: 2011
Published by: ಅಂಕಿತ ಪುಸ್ತಕ
Address: ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 26617100

Synopsys

‘ಬದುಕು ಮಾಯೆಯ ಆಟ’ ಕೃತಿಯು ವಸುಮತಿ ಉಡುಪ ಅವರ ಕತಾಸಂಕಲನವಾಗಿದೆ. ಈ ಕೃತಿಯು  ಕ್ಲಿಷ್ಟತೆಯಿಲ್ಲದೆ ಸರಳ ಭಾಷೆ ನಿರೂಪಣೆ ನೇರ ಕತೆಗಾರಿಕೆಯಿಂದ ಓದುಗನನ್ನು ಸುಲಭವಾಗಿ ತನ್ನೊಳಗೆ ಸೇರಿಸಿಬಿಡುತ್ತದೆ. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತುವಾಗಿದೆ. ಬಂದನಾ ಹುಲಿರಾಯ, ಅಗ್ನಿದಿವ್ಯ, ಮೃಗತೃಷ್ಣಾ, ಪಾತಾಳ ಗರಡಿ, ನಮ್ಮ ನಡುವಿನ ಕಾಂತಾಮಣಿಯರು, ಅಂತರಂಗದ ಸಂಬಂಧಗಳು, ವಿಮೋಚನ, ಮುಂತಾದ ಕಾದಂಬರಿಗಳು ಜನಮನ ಸೂರೆಗೊಂಡಿವೆ. ಯಾವುದನ್ನೂ ವೈಭವೀಕರಿಸಿದೆ. ನಿರ್ಭಾವುಕರಾಗಿ ಇಡೀ ಬದುಕನ್ನು ಕಂಡದ್ದು ಕಂಡ ಹಾಗೆ ಚಿತ್ರಿಸುತ್ತಾರೆ. ಇವರ ಕತೆಗಳಲ್ಲಿ ಬರುವ ಮಹಿಳಾ ಪಾತ್ರಗಳು ಬದುಕಿನೊಂದಿಗೆ ಮುಖಾಮುಖಿಯಾಗುವ ಕ್ರಮ ಆಧುನಿಕ ಸೂಕ್ಷ್ಮತೆಗಳನ್ನು ಗಟ್ಟಿತನವನ್ನು ಹೊಂದಿರುವಂತದ್ದು ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ. 

About the Author

ವಸುಮತಿ ಉಡುಪ
(18 April 1948)

ಲೇಖಕಿ ವಸುಮತಿ ಉಡುಪ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಿರಣಕೆರೆಯಲ್ಲಿ 1948 ಏಪ್ರಿಲ್ 18ರಂದು ಜನಿಸಿದರು. ತಾಯಿ ತ್ರಿಪುರಾಂಬ, ತಂದೆ ರಂಗಾಭಟ್ಟರು. ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇವರು ಬರೆದ ಕಥೆಗಳು ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ವಿವಿಧ ಭಾಷೆಗೆ ಅನುವಾದಗೊಂಡಿವೆ.  ಪರಿವರ್ತನೆ, ಸಂಬಂಧಗಳು, ಅನವರತ, ಅವ್ಯಕ್ತ ವಸುಮತಿ ಅವರ ಪ್ರಮುಖ ಕಾದಂಬರಿಗಳು. ಬಂದನಾ ಹುಲಿರಾಯನು, ವಿಕಲ್ಪ, ಶೇಷ ಪ್ರಶ್ನೆ ಅವರ ಕತಾ ಸಂಕಲನ. ‘ಸೀತಾಳದಂಡೆ’ ಮತ್ತೊಂದು ಪ್ರಬಂಧ ಸಂಕಲನ. ಅವರ ಹಲವಾರು ಕತೆಗಳು ಹಿಂದಿ, ತೆಲುಗು ಭಾಷೆಗೆ ಅನುವಾದಗೊಂಡಿದೆ. ಅವರ ಸಾಹಿತ್ಯ ಸೇವೆಗೆ ‘ಅಳಸಿಂಗ ಪ್ರಶಸ್ತಿ, ರಾಮಕ್ಕ ಪದ್ಮಕ್ಕ ...

READ MORE

Related Books