ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಎ.ಎನ್. ಪ್ರಸನ್ನ ಅವರ `ಉಳಿದವರು’ ಕೃತಿಗೆ ಮುನ್ನುಡಿಯಲ್ಲಿ ಗೋಪಾಲಕೃಷ್ಣ ಅಡಿಗರು “ಇತ್ತೀಚಿನ ಸಣ್ಣ ಕಥೆಗಾರರಲ್ಲಿ ತುಂಬಾ ಗಣ್ಯಸ್ಥಾನ ಇವರಿಗೆ ಸಲ್ಲುತ್ತದೆ. ಮನಸ್ಸಿನ ಅತ್ಯಂತ ಸೂಕ್ಷ್ಮವಾದ ಪದರುಗಳನ್ನು ಶೋಧಿಸುವವರ ಮೂಲಕ ವ್ಯಕ್ತಿಯೊಬ್ಬನ ಅಂತರಂಗ ಜೀವನದ ಸಂಕೀರ್ಣತೆಯನ್ನು ಈ ಸಣ್ಣ ಕಥೆಗಳು ತುಂಬಾ ಹೃದ್ಯವಾಗಿ ಚಿತ್ರಿಸುತ್ತವೆ. ಸಂವೇದನೆಯ ಚುರುಕು, ಭಾಷೆಯ ಭಾವ, ಸಂಯಮಗಳಿಂದ ಈ ಕಥೆಗಳು ನಮ್ಮ ಮನಸ್ಸನ್ನು ಮುಟ್ಟುತ್ತವೆ. ತಾನು ಸರಿ ಎಂದು ತಿಳಿದ ರೀತಿಯಲ್ಲಿ ನಡೆಯಲಾರದ ಮನುಷ್ಯನ ಸಂಕಟ, ಆತಂಕಗಳು ಈ ಕಥೆಗಳ ಹಿಂದಿನ ಮೂಲ ಸಾಮಗ್ರಿ” ಎಂದಿದ್ದಾರೆ.
ಪ್ರಸನ್ನರ ‘ಉಳಿದವರು’, ‘ಪ್ಯಾರಾಸೈಟ್’ ಇಂತಹ ಕಥೆಗಳಲ್ಲಿ ಅಪರೂಪವಾದ ಸಂದರ್ಭಕ್ಕೆ ಉಚಿತವಾದ ನವನವೀನ ವಾದ ವಿವರಣೆಗಳನ್ನು ನೀಡಿದ್ದಾರೆ. ‘ನಾವು ಹೇಗಿದ್ದೇವೆ?’ ಎಂದುಕೊಂಡರೆ ನಮಗೆ ದಿಗಿಲಾಗುವಂತೆ ಆತ್ಮನಿರೀಕ್ಷಣೆಗಳನ್ನು ನೇರವಾಗಿ ಹೇಳುವುದೇ ಅಲ್ಲದೆ ಕಲಾತ್ಮಕವಾಗಿ ಹೇಳುತ್ತಾರೆ. ಕಥೆಯ ಸಂಯೋಜನೆಯಲ್ಲಿಯೇ ಕಥೆಯ ಅರ್ಥಗಳು ಹೊರಹೊಮ್ಮುತ್ತವೆ.
ಎಲೆಕ್ಟ್ರಿಕ್ ಎಂಜಿನಿಯರಿಂಗ್ ಪದವಿ ಪಡೆದು, ಕೆ.ಪಿ.ಟಿ.ಸಿ.ಎಲ್. ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಲೇಖಕ ಎ.ಎನ್. ಪ್ರಸನ್ನ ಮೊದಲಿನಿಂದಲೂ ಸಾಹಿತ್ಯ, ನಾಟಕ ಮತ್ತು ಚಲನಚಿತ್ರದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡವರು. 1974ರಲ್ಲಿ ’ಉಳಿದವರು’ ಕಥಾಸಂಕಲನದಿಂದ ಆರಂಭಿಸಿ ಇಲ್ಲಿಯ ತನಕ ನಾಲ್ಕು ಕಥಾಸಂಕಲನಗಳನ್ನು ಹೊರತಂದಿದ್ದಾರೆ. ಅಲ್ಲದೇ ಮಾರ್ಕೆಜ್ ಅವರ ’ಒನ್ ಹಂಡ್ರೆಡ್ ಇಯರ್ ಆಫ್ ಸಾಲಿಟ್ಯೂಡ್’ (ನೂರು ವರ್ಷದ ಏಕಾಂತ) ಕಾದಂಬರಿಯನ್ನು ಹಾಗೂ ಸ್ಯಾಮ್ಯುಯಲ್ ಬೆಕೆಟ್ ಅವರ ಬೆಕೆಟ್ ನಾಟಕವನ್ನು ಝಾ ಆನ್ವಿ, ಎಡ್ವರ್ಡ್ ಆಲ್ಬಿ ಅವರ (ಮೂರನೇ ದಡ-ಕಥೆಗಳು) ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರತಿಫಲನ, ಕಳೆದ ಕಾಲದ ಕಡಲು, ಉಳಿದವರು. ರಥಸಪ್ತಮಿ ಎ.ಎನ್. ...
READ MORE