ದಿನಚರಿಯ ಕಡೇ ಪುಟದಿಂದ...

Author : ಜಯಶ್ರೀ ಕಾಸರವಳ್ಳಿ

Pages 138

₹ 110.00




Year of Publication: 2014
Published by: ಮನೋಹರ ಗ್ರಂಥ ಮಾಲಾ
Address: ಸುಭಾಶ್ ಬೀದಿ, ಧಾರವಾಡ

Synopsys

ಲೇಖಕಿ ಜಯಶ್ರೀ ಕಾಸರವಳ್ಳಿ ಅವರ ಕಥೆಗಳ ಸಂಕಲನ-ದಿನಚರಿಯ ಕಡೇ ಪುಟದಿಂದ. ಅನುಭವಕ್ಕೆ ಆಳವಾಗಿ ದಕ್ಕಿರುವ ವಸ್ತುವನ್ನೇ ಇಲ್ಲಿಯ ಕಥೆಗಳಿಗೆ ರೂಪು ನೀಡಿದ್ದು, ಹಲವು ಆಯಾಮಗಳಲ್ಲಿ ತೆರೆದು ತೋರುತ್ತವೆ. ಹೆಣ್ಣಿನ ಘರ್ಷಣೆಗಳ ಮೂಲವೂ ಇಲ್ಲಿಯ ಬಹುತೇಕ ಕಥೆಗಳ ವಸ್ತು. ಮಾನವ ಅನುಭವದ ನೆಲೆ. ಆಧುನಿಕತೆಯೂ ಸೇರಿದಂತೆ ಇತರ ಹತ್ತು ಹಲವು ಕಾರಣಗಳಿಗಾಗಿ ಅನೂಹ್ಯ ಬದಲಾವಣೆಗಳನ್ನು ಇಲ್ಲಿಯ ಕಥೆಗಳು ಒಳಗೊಂಡಿವೆ.

About the Author

ಜಯಶ್ರೀ ಕಾಸರವಳ್ಳಿ

'ತಂತಿ ಬೇಲಿಯ ಒಂಟಿ ಕಾಗೆ' ಕಥಾ ಸಂಕಲನದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ ಜಯಶ್ರೀ ಕಾಸರವಳ್ಳಿ ಅವರು ಮೊದಲ ಕೃತಿಗೇ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಮಲ್ಲಿಕಾ ಪ್ರಶಸ್ತಿ ಹೀಗೆ ಕೆಲವು ಪ್ರಶಸ್ತಿ ಪಡೆದಿದ್ದಾರೆ. ಮಾರ್ಕೆಸ್ ಸೇರಿದಂತೆ ಹಲವು ಖ್ಯಾತ ಕತೆಗಾರರ ಕತೆಗಳನ್ನು ಜಯಶ್ರೀ ಕನ್ನಡಕ್ಕೆ ಅನುವಾದಿಸಿದ್ದಾರೆ. ನವದೆಹಲಿಯ 'ತುಲಿ ಕಾ' ಪ್ರಕಾಶನದ ಹತ್ತಕ್ಕೂ ಹೆಚ್ಚು ಮಕ್ಕಳ ಪುಸ್ತಕಗಳನ್ನು ಅವರು ಕನ್ನಡೀಕರಿಸಿದ್ದಾರೆ. ...

READ MORE

Reviews

(ಹೊಸತು, ಡಿಸೆಂಬರ್ 2014, ಪುಸ್ತಕದ ಪರಿಚಯ)

ಜಯಶ್ರೀ ಕಾಸರವಳ್ಳಿಯವರ “ದಿನಚರಿಯ ಕಡೇ ಪುಟದಿಂದ..” ಕಥಾ ಸಂಕಲನ ಸ್ತ್ರೀ ಸಂವೇದನೆಯನ್ನು ವಿಭಿನ್ನವಾಗಿ ಪ್ರಸ್ತುತಪಡಿಸುವ ಕೃತಿ, ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿರುವ ಕೃತಿಯಲ್ಲಿ ಜಯಶ್ರೀಯವರು ಆಪ್ತವಾಗಿ, ಪ್ರಸ್ತುತ ಸಿದ್ಧ ಮಾದರಿಗೆ ಭಿನ್ನವಾಗಿ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಸ್ತ್ರೀವಾದಿ ಚಿಂತನೆಗಳೆಂದರೂ ಬದುಕಿನ ಸಹಜಮಾರ್ಗದಲ್ಲಿ ಯಾವ ವ್ಯಾಖ್ಯಾನಗಳಿಲ್ಲದೆ ಪಾತ್ರವಾಗಿ, ನಿರೂಪಕಿಯಾಗಿ ಹೇಳಿದ ವಿಶಿಷ್ಟ ಶೈಲಿಯಲ್ಲಿ ಇಲ್ಲಿನ ಕಥೆಗಳವೆ. ಕಥಾವಸ್ತು ಬದುಕು ಕೇಂದ್ರಿತವಾಗಿದ್ದರೂ ನಿರೂಪಣಾ ವಿಧಾನದಲ್ಲಿ ಮಹಿಳೆಯ ನೋಟ ಇರುವುದರಿಂದ ಅತ್ಯಂತ ಸೂಕ್ಷ್ಮಸ್ತರದಲ್ಲಿ ಸ್ತ್ರೀವಾದಿ ಸಂವೇದನೆಗಳನ್ನು ಇಲ್ಲಿನ ಕತೆಗಳು ಸಾದರಪಡಿಸುತ್ತವೆ. ಪ್ರತಿಯೊಂದು ಕಥೆ ಭಿನ್ನ ಕಥಾವಸ್ತುವನ್ನು ಹೊಂದಿದ್ದರೂ ಆಶಯದ ದೃಷ್ಟಿಯಿಂದ ಕೇಂದ್ರಿಕೃತವಾಗಿದೆ. ಕಂಡದ್ದೇನು ?' ಎಂಬ ಕಥೆ ಬದುಕಿನ ವಿಧಾನದಿಂದಲೇ ಪುರುಷಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವ, ಧಿಕ್ಕರಿಸುವ ವಿಶಿಷ್ಟ ಕಥೆ, ಕಥಾನಾಯಕಿ ತನ್ನ ಆಮಾಯಕತನ ಬಂದಲೇ ಸಂಕಲನದ ಎಲ್ಲ ಕಥೆಗಳ, ಸಂಕಲನದ ನಾಯಕಿಯಾಗಿ ನಿಲ್ಲುತ್ತಾಳೆ, ಭಾಷೆ, ತಂತ್ರಗಳಿಂದಲೂ ಇದು ವಿಭಿನ್ನ ಕೃತಿ.  

Related Books