‘ಗಂಧ ಮತ್ತು ಕಲ್ಲು’ ಲೇಖಕ ಶ್ರೀನಿವಾಸ ಹಾವನೂರ ಅವರು ಬರೆದಿರುವ ಹೆಣ್ಣಿನ ಜೀವನದ ಏಳು ಬೀಳುಗಳನ್ನು ವಯೋನುಕ್ರಮದಲ್ಲಿ ಚಿತ್ರಿಸುವ ಆಯ್ದ ಕತೆಗಳ ಸಂಗ್ರಹ. ಲೇಪಾಕ್ಷಿಯೂ ಲೇಡೀಸ್ ಹಾಸ್ಟೆಲೂ (ಹದಿಹರಯದಲ್ಲಿ), ಅವರು(ವಿವಾಹ ಪೂರ್ವದಲ್ಲಿ), ಸ್ವಪ್ನ ಮುರಲಿ (ವೈವಾಹಿಕ ಸ್ವಪ್ನಲೋಕ), ವಾತ್ಸಲ್ಯ ಪರೀಕ್ಷೆ(ತಾಯ್ತನ ಸಂಭ್ರಮ), ಸಂಭಾವಿತ (ಗಂಡನ ಚಿತ್ತಚಾಂಚಲ್ಯ, ಗಂಧ ಮತ್ತು ಕಲ್ಲು (ಸಂಸಾರದ ವಿರಸ), ಕಾಗೆಗೆ ಹೇಳಿದ ಕಥೆ(ಸ್ತ್ರೀ ಜಾರಿದಾಗ), ಇಂತೀ ನಮಸ್ಕಾರ(ಸಂಸಾರದ ಕೊನೆಯ ಘಟ್ಟದಲ್ಲಿ), ಮಾನವರು (ಮಾನಸಿಕ ವಿಚ್ಛೇದ) ಕತೆಗಳು ಸಂಕಲನಗೊಂಡಿವೆ.
ಕನ್ನಡ ಸಾಹಿತ್ಯ ಇತಿಹಾಸ ಅಭ್ಯಸಿಸಲು ಮೊತ್ತಮೊದಲು ಕಂಪ್ಯೂಟರ್ನ್ನು ಬಳಿಸಿದವರು ಡಾ. ಶ್ರೀನಿವಾಸ ಹಾವನೂರ. ಕಂಪ್ಯೂಟರಿನ ಹಾಗೆ ಅವರು ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಕೊಟ್ಟಿದ್ದು ವೈವಿಧ್ಯತೆಯು ಬೆಡಗು, ಕಾದಂ ಕಥನ ಎಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟು ಹಾಕಿರುವ ಅವರು ನಾಗರಿಕತೆ, ಇತಿಹಾಸ ಸಂಶೋಧನೆ, ಸಾಹಿತ್ಯ ವಿಶ್ಲೇಷಣೆ, ಲಲಿತಪ್ರಬಂಧ, ಜೀವನ ಚರಿತ್ರೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದವರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ತಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಮುಂಬಯಿಯ ಹೋಮಿ, ಜೆ. ಬಾಬಾ ಅಣು ಸ್ಥಾವರ ಕೇಂದ್ರದ ಗ್ರಂಥಪಾಲಕರಾಗಿ ದುಡಿದ ...
READ MORE