ಅಪರೂಪದ ಕತೆಗಳು

Author : ಕೆ.ವಿ. ತಿರುಮಲೇಶ್‌

Pages 316

₹ 300.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

‘ಅಪರೂಪದ ಕತೆಗಳು’ ಕೆ.ವಿ.ತಿರುಮಲೇಶ್ ಅವರ ಕಥಾಸಂಕಲನ. ಕಳೆದ ಏಳೆಂಟು ವರ್ಷಗಳಲ್ಲಿ ಅವರು ಬರೆದ ಕೆಲವು ಕಥೆಗಳ ಸಂಕಲನ. ಜನರ ಗಮನ ಸೆಳೆಯದ ಕಥೆಗಳಿವು, ಆದ್ದರಿಂದ ಅಪರೂಪದ ಕಥೆಗಳಿವು ಎನ್ನುತ್ತಾರೆ ತಿರುಮಲೇಶ್. ಆದರೆ ಇನ್ನೂ ಯಾರೂ ಸಾಮಾನ್ಯವಾಗಿ ಹೇಳದ ಅಪೂರ್ವ ಕಥೆಗಳು ಎಂಬ ಅರ್ಥವೂ ಈ ಪದಗಳಿಗೆ ಇದೆ ಎಂದು ಕಾಣುತ್ತದೆ. ಅದು ಪ್ರತಿಯೊಬ್ಬ ಲೇಖಕನ ಆಸೆ. ಆದರೆ ನಿರ್ಣಯ ಓದುಗನಿಗೆ ಬಿಟ್ಟದ್ದು ಎಂಬುದು ತಿರುಮಲೇಶ್ವರ್ ಅವರ ಅಭಿಪ್ರಾಯ. ಈ ಸಂಕಲನದಲ್ಲಿ ಐತ, ಅರೇಬಿಯಾ, ಅತಿಥಿ ನಟಿ, ಅವಿನಾಶನ ಜನ್ಮದಿನ-1, ಅವಿನಾಶನ ಜನ್ಮದಿನ-2, ಭುಜ್, ಕಂದೀಲಿನ ಸ್ತ್ರೀ, ಸಿಂಗರೇನಿ ಸಿರಾಮಿಕ್ಸ್, ಮಾಯಾಬಝಾರ್, ನಿನಾದಗಳು, ಒಂಯ್ಕ, ಶುಭವಾಗತೈತೆ, ಅನೇಕ ಮಾರ್ಜಿನಲ್ ಮ್ಯಾನ್, ಕಾಡಿನ ಯಕ್ಷಿಯೂ ಕಾಡಗದ ರಾಣಿ, ಸಂಧ್ಯಾದೇವಿ, ಎಲ್ಲಿ ಮನಕಳುಕಿರದೋ ಎಂಬ 16 ಕಥೆಗಳಿವೆ.

ಸೃಜನಾತ್ಮಕವಾಗಿ ಬರೆಯುತ್ತ ಲೇಖಕ ಹೆಚ್ಚು ಸ್ವಪ್ರಜ್ಞನಾಗುವುದು ಸರಿಯಲ್ಲ. ಸಾಧ್ಯವೂ ಇಲ್ಲ. ಆದರೂ ಲೇಖಕನನ್ನು ಹೆಚ್ಚೆಚ್ಚು ಸ್ವಪ್ರಜೆಗೆ ತಳ್ಳುವ ವಿದ್ಯಮಾನಗಳು ನಡೆಯುತ್ತಲೇ ಇರುತ್ತವೆ - ಇದು ಹಿಂದಿಗಿಂತಲೂ ಇಂದು ಜಾಸ್ತಿ. ಯಾಕೆಂದರೆ, ನಮ್ಮದು ವೈಚಾರಿಕತೆಯ ಯುಗ, ಪ್ರಶ್ನೆಯ ಯುಗ, ಆವು ನನ್ನ ಬರಹಗಳನ್ನೂ ಬಾಧಿಸಿರಬಹುದು. ಅಂಥದೆಲ್ಲ ನನ್ನ ಕೈಮೀರಿದ ಪ್ರಮೇಯ. ಕತೆ ಕವಿತೆಗಳನ್ನು ಬರೆಯಲು ಅಪಾರವಾದ ಅನುಭವ ಬೇಕು ಎನ್ನುತ್ತಾರೆ, ನಿಜ. ಆದರೆ, ಅದರ ಜತೆಗೇ ಒಂದು ರೀತಿಯ ಮುಗ್ಧತೆಯೂ ಬೇಕಲ್ಲವೇ? ಅದೊಂದು ಶಲದ 'ಬಿಟ್ಟುಕೊಡುವ' ಮುಗ್ಧತೆ, ಆದದ್ದಾಗಲಿ ಎನ್ನುವಂಥದು. ಇಂಗ್ಲಿಷ್‌ನಲ್ಲಿ 'ಆಬಾಂಡನ್' ಎನ್ನುತ್ತಾರೆ. ನಿಯಂತ್ರಣದ ಜತೆಗೇ ಆಬಾಂಡನ್ ಕೂಡ ಬೇಕು. ಇದು ಬರಹವನ್ನು ಅನಿರೀಕ್ಷಿತತೆಗೆ ಒಡ್ಡುತ್ತದೆ. ಎಲ್ಲಾ ಲೇಖಕರ ಅನುಭವ ಇದು ಎಂದುಕೊಂಡಿದ್ದೇನೆ. ನನ್ನಂಥವರಿಗೆ ಪ್ರತ್ಯೇಕವಾಗಿಯೂ ಪ್ರಾಯೋಗಿಕತೆ ಇಷ್ಟ, ಪ್ರಾಯೋಗಿಕತೆ ಒಂದು ರಿಸ್ಕ್‌, ಆದರೆ ಅದಕ್ಕೆ ಏನೂ ಮಾಡುವ ಹಾಗಿಲ್ಲ.

About the Author

ಕೆ.ವಿ. ತಿರುಮಲೇಶ್‌
(12 September 1940 - 30 January 2023)

ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ. ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ...

READ MORE

Related Books