ಧೃತರಾಷ್ಟ್ರ ಸಂತಾನ

Author : ಜೀವಿ (ಜಿ.ವಿ. ಕುಲಕರ್ಣಿ)



Year of Publication: 2019

Synopsys

ಸಾಹಿತಿ ‘ಜೀವಿ’ ಎಂದೇ ಖ್ಯಾತಿಯ ಡಾ. ಜೀವಿ ಕುಲಕರ್ಣಿ ಅವರ ಕಥಾ ಸಂಕಲನ-ಧೃತರಾಷ್ಟ್ರ ಸಂತಾನ. ಸಾಹಿತಿ ಡಾ. ಜಿ.ಎನ್. ಉಪಾಧ್ಯ ಅವರು ಸಂಪಾದಿಸಿದ್ದಾರೆ. ಈ ಕೃತಿಯು ಮೊದಲ ಬಾರಿಗೆ 1962ರಲ್ಲಿ ಪ್ರಕಟವಾಗಿತ್ತು. ಧೃತರಾಷ್ಟ್ರ ಸಂತಾನ, ಆತ್ಮಬಲಿ, ಅಧಿಕಾರ ನಕ್ಕಾಗ ಮಾನವತೆ ಅಳುತ್ತಿತ್ತು, ಡಾಕ್ಟರ್ ಅಶೋಕ, ವಿಜ್ಞಾನದ ಭೂತ, ಅವನ ಪ್ರೀತಿ, ಬಿಡುಗಡೆ, ಚಿಕ್ಕತಮ್ಮ ನನ್ನ ಪ್ರೇಯಸಿ, ನಮ್ಮ ಬೆಕ್ಕು, ಸಿಗರೇಠಿನ ಹವ್ಯಾಸ, ಉದಾರ ದಾನ ಹೀಘೆ 9 ಕಥೆಗಳನ್ನು ಸಂಕಲಿಸಿದೆ. ಡಾ. ದ.ರಾ. ಬೇಂದ್ರೆ ಅವರು ಕೃತಿಗೆ ಮುನ್ನುಡಿ ಬರೆದು ‘ಒಂದೊಂದು ಕಥೆಯು ನಮ್ಮ ಕುರುಡುತನದ ಅರಿವು ಮಾಡಿಕೊಟ್ಟು ನಮ್ಮ ಹೃದಯದ ಮಾತಿಗೆ ಕಿವಿಗೊಡಬೇಕು ಎಂದು ಕಿವಿ ಹಿಂಡುವಂತಿವೆ. ಜೀವಿ ಅವರ ಕತೆಗಳು ರೂಢಿಯ ಕುರುಡುತನವನ್ನು ಬಯಲಿಗೆಳೆದು, ಪಶ್ಚಾತ್ತಾಪ, ಹೃದಯ ಪರಿವರ್ತನೆ, ಅರಿವಿನ ನಡೆತೆಯನ್ನು ಬಯಸಿ ಬಂದವು. ನಾಟಕೀಯತೆ, ಕಾವ್ಯಸ್ಪರ್ಶ, ವಿಡಂಬನೆ, ಶೀಲ, ಆದರ್ಶ ಹೀಗೆ ಎಲ್ಲದರ ಎಚ್ಚರಿಕೆಯಿಂದ ಹೆಜ್ಜೆ ಹಾಕುವ ಈ ಕತೆಗಳು ವಾಚನೀಯವಾಗಿವೆ. ಪ್ರಜಾಸಾಮಾನ್ಯರು ಹೃದಯ ಕುರುಡುತನ, ಬುದ್ಧಿಯ ಕುರುಡುತನ, ನಡತೆಯ ಕುರುಡುತನ ಹಿತವಲ್ಲ ಎಂಬ ತತ್ವ ಸಾರುತ್ತವೆ’ ಎಂದು ಪ್ರಶಂಸಿಸಿದ್ದಾರೆ.

About the Author

ಜೀವಿ (ಜಿ.ವಿ. ಕುಲಕರ್ಣಿ)
(10 June 1937)

  ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ...

READ MORE

Related Books