ಜನಪದ ಜೀವನ

Author : ಬೆಟಗೇರಿ ಕೃಷ್ಣಶರ್ಮ (ಆನಂದಕಂದ)

Pages 174

₹ 1.00




Year of Publication: 1955
Published by: ಕರ್ನಾಟಕ ಸಾಹಿತ್ಯ ಸಹಕಾರಿ ಸಂಘ ಲಿ.
Address: ಧಾರವಾಡ

Synopsys

ಬೆಟಗೇರಿ ಕೃಷ್ಣ ಶರ್ಮ (ಆನಂದ ಕಂದ) ಅವರು ಬರೆದ ಐದನೇ ಕಥಾ ಸಂಕಲನ-ಜನಪದ ಜೀವನ. ಇದರಲ್ಲಿ 7 ಕಥೆಗಳಿವೆ. ಹಳ್ಳಿಯ ಜೀವನವನ್ನು ಸಮಗ್ರವಾಗಿ ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸುವ ಕಥೆಗಳಿವು. ಜನಪದರ ಜೀವನ ಚಿತ್ರಗಳಿವು. ಪರಭಾಷಾ ಸಂಸ್ಕೃತಿಯ ಪ್ರಭಾವವಿಲ್ಲದೇ ಒಂದು ಕಥೆ-ಕಾದಂಬರಿ-ನಾಟಕ ಹೀಗೆ ಯಾವುದೇ ಸಾಹಿತ್ಯ ಪ್ರಕಾರ ಬರೆಯಬಹುದು ಎಂಬುದಕ್ಕೆ ಇಲ್ಲಿಯ ಕಥೆಗಳು ಕನ್ನಡಿ ಹಿಡಿಯುತ್ತವೆ. ಶೈಲಿ ಹಾಗೂ ವಿಷಯ ನಿರೂಪಣೆ ಪ್ರೌಢವಾಗಿದ್ದರೂ ಸಾಮಾನ್ಯ ಓದುಗರ ಮನವನ್ನು ಆಕರ್ಷಿಸುವಂತಿವೆ ಎಂದು ಸಾಹಿತಿ ಶ.ಚೆ. ನಂದಿಮಠ ಅವರು ಪ್ರೋತ್ಸಾಹದಾಯಕ ಮಾತುಗಳನ್ನಾಡಿದ್ದಾರೆ.

About the Author

ಬೆಟಗೇರಿ ಕೃಷ್ಣಶರ್ಮ (ಆನಂದಕಂದ)
(16 April 1900 - 30 October 1982)

ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ 1900ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..  ಕೃಷ್ಣಶರ್ಮರು 12ನೇ  ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ  ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು  ಹಾಗೂ  ಮರು ವರ್ಷವೇ ಪತ್ನಿ ತೀರಿ ಹೋದರು. 5ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ 5 ...

READ MORE

Related Books