ಮತ್ತೊಬ್ಬ ಸರ್ವಾಧಿಕಾರಿ

Author : ನಟರಾಜ ಹುಳಿಯಾರ್

Pages 124

₹ 110.00




Year of Publication: 2020
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

‘ಮತ್ತೊಬ್ಬ ಸರ್ವಾಧಿಕಾರಿ’ ಲೇಖಕ, ಚಿಂತಕ ನಟರಾಜ್ ಹುಳಿಯಾರ್ ಅವರ ಕಥಾಸಂಕಲನ. ಈ ಕೃತಿಗೆ ಪಿ. ಲಂಕೇಶ್ ಬೆನ್ನುಡಿ ಬರೆದಿದ್ದಾರೆ. ಅವರೇ ಹೇಳುವಂತೆ ಒಬ್ಬ ಲೇಖಕ ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಸ್ಪಷ್ಟವಾಗುತ್ತಾ ಹೋಗಿ ಬೆಳೆಯುವುದಿಲ್ಲ. ತೀವ್ರವಾಗುತ್ತಾ ಹೆಚ್ಚು ಹೆಚ್ಚು ದಿಗ್ಬ್ರಮೆಗೊಳ್ಳುತ್ತಾ ನಡೆದು ಅದನ್ನೆಲ್ಲಾ ಹೇಳುವ ಉಪಾಯ ಕಂಡುಕೊಳ್ಳುತ್ತಾನೆ. ಈ ದೃಷ್ಟಿಯಿಂದ ನಟರಾಜ್ ಹುಳಿಯಾರ್ ಮತ್ತೊಬ್ಬ ಸರ್ವಾಧಿಕಾರಿ ಎಂಬ ತಮ್ಮ ಸಂಕಲನದ ಕಥೆಗಳಲ್ಲಿ ನಿಜಕ್ಕೂ ಉತ್ತಮ ಬರಹಗಾರನಾಗುವ ಎಲ್ಲಾ ಸೂಚನೆ ನೀಡಿದ್ದಾರೆ.

ನಾನು ಬಲ್ಲ ಕೆಲವೇ ಜನ ಯುವ ಬರಹಗಾರರಲ್ಲಿ ನಟರಾಜ್ ವಿಶಿಷ್ಟ ಶೈಲಿ ಪಡೆದವರು. ಕಾಣುವ ಧೈರ್ಯದ ಜೊತೆಗೆ ಕಂಡದ್ದರ ಬಗ್ಗೆ ಅನುಮಾನ ಇಟ್ಟುಕೊಂಡವರು. ತಮ್ಮ ಅನುಭವ ಮಂಡಿಸಲು ಹಾಸ್ಯ, ನಾಟಕೀಯತೆಯನ್ನೆಲ್ಲಾ ಬಳಸುವವರು ಎನ್ನುತ್ತಾರೆ. ಈ ಸಂಕಲನದ ಮೊದಲ ಕಥೆ ನೆತ್ತರು ಮತ್ತು ಗುಲಾಬಿ ಎಲ್ಲಾ ದೃಷ್ಟಿಗಳಿಂದಲೂ ತೃಪ್ತಿ ಕೊಡುವ ಕಥೆ. ಹಾಗೆಯೇ ಮಾಯಾಕಿನ್ನರಿಯಲ್ಲಿ ನಿಚ್ಚಲವಾಗಿ ಮೂಡಿರುವ ಆಚಾರಿಯ ಪಾತ್ರ ಅಲ್ಲಿ ಬರುವ ವೇಶ್ಯೆ ಹಾಗೂ ಕಥೆ ಬೆಳೆಯುವ ರೀತಿ ಅದ್ಭುತವಾಗಿವೆ. ಈ ಕೃತಿ ನಾಲ್ಕು ಮುದ್ರಣಗಳನ್ನು ಕಂಡಿದೆ. 

About the Author

ನಟರಾಜ ಹುಳಿಯಾರ್

ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು'ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರು ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಮತ್ತೊಬ್ಬ ಸರ್ವಾಧಿಕಾರಿ, ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು, ಮಾಯಾಕಿನ್ನರಿ (ಕಥಾಸಂಕಲನಗಳು), ರೂಪಕಗಳ ಸಾವು (ಕವಿತೆಗಳು), ಗಾಳಿಬೆಳಕು (ಸಾಂಸ್ಕತಿಕ ಬರಹಗಳು), ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ (ತೌಲನಿಕ ಅಧ್ಯಯನ), ಇಂತಿ ನಮಸ್ಕಾರಗಳು (ಲಂಕೇಶ್‌-ಡಿ.ಆರ್. ನಾಗರಾಜ್ ಕುರಿತ ...

READ MORE

Related Books